ಕಾರ್ಕಳ:ತಡರಾತ್ರಿ ಮನೆಗೆ ನುಗ್ಗಿ ಕಳವು

ಕಾರ್ಕಳ ಎ.13 (ಉಡುಪಿ ಟೈಮ್ಸ್ ವರದಿ) : ತಾಲೂಕಿನ ಮಿಯಾರು ಗ್ರಾಮದ ರಾಜಾರಾಮ್ ಎಂ ಎಂಬವರ ಮನೆಗೆ ನಿನ್ನೆ ತಡರಾತ್ರಿ  ನುಗ್ಗಿದ ಕಳ್ಳರು ಮನೆಯಲ್ಲಿದ್ದ 7000 ರೂ. ನಗದು ಹಾಗೂ  ಸಾವಿರ ಬೆಲೆ ಬಾಳುವ ಒಂದು ವಾಚನ್ನು ಕಳವು ಗೈದಿರುವ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಎಕ್ಸ್  ಪೋರ್ಟ್ ಬಿಸಿನೆಸ್ ಮಾಡುತ್ತಿರುವ ರಾಜಾರಾಮ್ ಎಂ ಅವರು ತಾಯಿ ಜಯಲಕ್ಷ್ಮಿ ಪ್ರಭು  ಮತ್ತು ನಾದಿನಿ ಚೇತನ ಇವರೊಂದಿಗೆ ಮಿಯಾರು ಗ್ರಾಮದ ದಲ್ಲಿ ವಾಸವಾಗಿದ್ದರು. 
ನಿನ್ನೆ ಮನೆಯಲ್ಲಿ ಎಲ್ಲರೂ ಮಲಗಿದ್ದ ವೇಳೆ ತಡರಾತ್ರಿ ಅಡುಗೆ ಕೋಣೆಯ ಕಿಟಿಕಿಯ ಚಿಲಕ ಮುರಿದು ಬಾಗಿಲು ತೆರೆದು ಒಳ ನುಗ್ಗಿದ ಕಳ್ಳರು 7,000‌ ರೂ ನಗದು ಹಾಗೂ 1000 ರೂ ಮೌಲ್ಯದ  ವಾಚನ್ನು ಕಳವು ಮಾಡಿಕೊಂಡು ಹೋಗಿದ್ದಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!