ಇದು ಸುಳ್ಳು ಹೇಳುವ, ಲೂಟಿ ಮಾಡುವ, ಸೂಟು ಬೂಟಿನ ಸರ್ಕಾರ: ರಾಹುಲ್‌ ಗಾಂಧಿ ಟ್ವೀಟ್

ನವದೆಹಲಿ:ಕೇಂದ್ರದ ಕೃಷಿ ಮಸೂದೆ ವಿರೋಧಿಸಿ ದೆಹಲಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಗೆ   ಬೆಂಬಲ ಸೂಚಿಸಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು, ಪ್ರತಿಭಟನಾನಿರತ ರೈತರ ಮೇಲೆ ಪೊಲೀಸರು ನಡೆಸಿದ ಜಲಫಿರಂಗಿ ಹಾಗೂ ಅಶ್ರುವಾಯು ಪ್ರಯೋಗವನ್ನು ತೀವ್ರವಾಗಿ ಖಂಡಿಸಿದ್ದಾರೆ.

ಈ ಬಗ್ಗೆ ಇಂದು ಟ್ವೀಟ್ ಮಾಡಿರುವ ಅವರು, ”ಸರ್ಕಾರವು ರೈತನ ಆದಾಯ ದ್ವಿಗುಣವಾಗುತ್ತದೆ ಎಂದು ಹೇಳಿತು. ಆದರೆ ಮಾಡಿದ್ದು ತಮ್ಮ ಸ್ನೇಹಿತರ ಆದಾಯ ನಾಲ್ಕು ಪಟ್ಟು ಹಾಗೂ ರೈತರ ಆದಾಯ ಅರ್ಧದಷ್ಟು,  ಇದು ಸುಳ್ಳು ಹೇಳುವ, ಲೂಟಿ ಮಾಡುವ, ಸೂಟು ಬೂಟಿನ ಸರ್ಕಾರ” ಎಂದು ಬರೆದುಕೊಂಡಿದ್ದು, ಅದರೊಂದಿಗೆ, ದೆಹಲಿಯಲ್ಲಿ ಪ್ರತಿಭಟನಾನಿರತ ರೈತರ ಮೇಲೆ ಪೊಲೀಸರು ನಡೆಸಿದ ಜಲಫಿರಂಗಿ ಹಾಗೂ ಅಶ್ರುವಾಯು ಪ್ರಯೋಗದ ವಿಡಿಯೋವನ್ನು ಕೂಡಾ ಉಲ್ಲೇಖಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!