ಕೆಂಪೇಗೌಡರು ಕಟ್ಟಿದ ಕೆರೆ ನುಂಗಿ, ನಾಲ್ಕೈದು ಕೆಜಿ ಅಕ್ಕಿ ನೀಡಿ ಪೋಸು ಕೊಡುತ್ತಿದ್ದಾರೆ- ಹೆಚ್‌ ಡಿಕೆ

ಜನರ ತೆರಿಗೆ ಹಣ ಲೂಟಿ ಮಾಡಿ, ಕೆರೆ ಮತ್ತು ರಾಜಕಾಲುವೆಗಳನ್ನು ನುಂಗಿದವರ ಅನ್ಯಾಯ ಅಕ್ರಮಗಳನ್ನು ಜನರಿಗೆ ತಲುಪಿಸುವ ಕಾರ್ಯ

ಬೆಂಗಳೂರು ಜೂ. 27: ಬೆಂಗಳೂರು ನಿರ್ಮಾತೃರಾದ ಕೆಂಪೇಗೌಡರು ನಗರದ ಉತ್ತಮ ಭವಿಷ್ಯಕ್ಕಾಗಿ ಕಟ್ಟಿದಂತಹ ಕೆರೆಗಳು ಹಾಗೂ ರಾಜಕಾಲುವೆಗಳನ್ನು ನುಂಗಿ ನೀರು ನಾಲ್ಕೈದು ಕೆಜಿ ಅಕ್ಕಿ ನೀಡಿ ಪೋಸು ಕೊಡುತ್ತಿದ್ದಾರೆ. ಜೂಲೈ ‌ 1 ರಿಂದ ಪ್ರಾರಂಭವಾಗುವ ಜನತಾ ಯಾತ್ರೆಯಲ್ಲಿ ಬೆಂಗಳೂರು ನಗರಕ್ಕೆ ನಮ್ಮ ಕೊಡುಗೆಗಳು ಹಾಗೂ ನಗರದ ಜನರ ತೆರಿಗೆ ಹಣದ ಲೂಟಿ ಹೊಡೆದು ಎಸಗಿರುವ ಅಕ್ರಮಗಳನ್ನು ಜನರ ಮುಂದೆ ಇಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಹೆಚ್‌ ಡಿ ಕುಮಾರಸ್ವಾಮಿ ಹೇಳಿದರು. 

ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಆರ್‌.ಟಿ ನಗರದ ಮೈದಾನದಲ್ಲಿ ಜ್ಯಾತ್ಯಾತೀತ ಜನತಾದಳ ಬೆಂಗಳೂರು ನಗರ ಹೆಬ್ಬಾಳ ವಿಧಾನಸಭಾ ಕ್ಷೇತ್ರದ ವತಿಯಿಂದ ಡಾ. ಸಯ್ಯದ್‌ ಮೋಹಿದ್‌ ಅಲ್ತಾಫ್‌ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡ ಜಯಂತೋತ್ಸವಲ್ಲಿ ಭಾಗವಹಿಸಿ ಅವರು ಮಾತನಾಡಿದರು. 

ನಾಡಪ್ರಭುಗಳು ಬಹಳ ದೂರದೃಷ್ಟಿ ಇಟ್ಟುಕೊಂಡು ಬೆಂಗಳೂರು ನಗರವನ್ನು ಕಟ್ಟಿದ್ದರು. ಕೆರೆಕಟ್ಟೆಗಳನ್ನು ಕಟ್ಟಿ ಇಡೀ ನಗರವನ್ನು ಜಲಶ್ಯಾಮಲಗೊಳಿಸಿದ್ದರು. ಆದರೆ, ಇಂದು ಭೂಗಳ್ಳರು ಸಾವಿರಾರು ಕೆರೆಗಳನ್ನು ತಮ್ಮ ಸ್ವಾರ್ಥ ಕ್ಕೋಸ್ಕರ ನುಂಗಿ ದೊಡ್ಡ ದೊಡ್ಡ ಕಟ್ಟಡಗಳನ್ನು ಕಟ್ಟಿಸಿಕೊಂಡು ಮೆರೆಯುತ್ತಿದ್ದಾರೆ. ಮಳೆ ಬಂದಂತಹ ಸಂಧರ್ಭ ದಲ್ಲಿ ಕೆರೆಗಳಲ್ಲಿ ನೀರು ತುಂಬದೆ ತಗ್ಗು ಪ್ರದೇಶದಲ್ಲಿ ವಾಸಿಸುತ್ತಿರುವ ಬಡವರ ಮನೆಗಳಿಗೆ ನೀರು ನುಗ್ಗುತ್ತದೆ. ಭೂ ಧಾಹಕ್ಕೆ ಬೆಂಬಲ ಕೊಟ್ಟಿರುವುದು ಸರಕಾರವನ್ನು ಆಳಿರುವ ರಾಜಕಾರಣಿಗಳು ಎನ್ನುವುದನ್ನ ನೋವಿನಿಂದ ಹೇಳುತ್ತೇನೆ. ಬೆಂಗಳೂರು ನಗರ ಅಭಿವೃದ್ದಿ ಹೆಸರಿನಲ್ಲಿ ರಾಜಕಾರಣಿಗಳು ಕೋಟ್ಯಾಂತರ ರೂಪಾಯಿಗಳನ್ನು ಲೂಟಿ ಮಾಡಿ ಚುನಾವಣೆ ಸಂಧರ್ಭದಲ್ಲಿ ಓಲೈಸುಲು ಮುಂದಾಗುತ್ತಾರೆ. ಇಂತಹ ರಾಜಕಾರಣಿಗಳಿಗೆ ಪ್ರೊತ್ಸಾಹ ನೀಡುವುದನ್ನ ನಿಲ್ಲಿಸದಿದ್ದಲ್ಲಿ ಸ್ವಾತಂತ್ರ್ಯ ಬಂದು ನೂರು ವರ್ಷಗಳಾದರೂ ಜೀವನ ಹೀಗೇ ಇರುತ್ತದೆ ಎಂದರು. 

ಜೂಲೈ ‌ 1 ರಿಂದ ಜನತಾ ಯಾತ್ರೆ: ಬೆಂಗಳೂರು ನಗರದಲ್ಲಿ ಜನತಾ ಯಾತ್ರೆಯನ್ನು ಪ್ರಾರಂಭಿಸಲಿದ್ದೇವೆ. 15 ವಾಹನಗಳ ಮೂಲಕ ಪ್ರತಿಯೊಂದು ವಾರ್ಡ್‌ ಮತ್ತು ರಸ್ತೆಗಳಿಗೂ ತಲುಪಲಿದ್ದೇವೆ. ಬೆಂಗಳೂರು ನಗರಕ್ಕೆ ಜೆಡಿಎಸ್‌ ಪಕ್ಷ ನೀಡಿರುವ ಕೊಡುಗೆಯನ್ನು ಸಾರಲಿದ್ದೇವೆ. ಹಾಗೆಯೇ, ಉತ್ತದಾಯಿತ್ವ ಇಲ್ಲದೇ ಜನರ ತೆರಿಗೆ ಹಣವನ್ನು ಲೂಟಿ ಮಾಡಿರುವ ಜನರ ನಡೆಸಿರುವ ಅನ್ಯಾಯ ಅಕ್ರಮಗಳ ಬಗ್ಗೆಯೂ ಜನರಿಗೆ ತಿಳುವಳಿಕೆ ನೀಡಲಿದ್ದೇವೆ ಎಂದರು. 

ಒಂದು ಬಾರಿ ಸ್ವತಂತ್ರವಾಗಿ ಆಡಳಿತ ನಡೆಸಲು ನಮ್ಮ ಪಕ್ಷಕ್ಕೆ ಅನುವು ಮಾಡಿಕೊಡಿ. ಇದರಿಂದ ಸ್ವತಂತ್ರವಾಗಿ ಅಭಿವೃದ್ದಿಯ ಹಲವಾರು ನಿರ್ಧಾರಗಳನ್ನು ತಗೆದುಕೊಳ್ಳಲು ಹಾಗೂ ಅದನ್ನು ಅನುಷ್ಠಾನಗಳಿಸಲು ಸಾಧ್ಯ ಎಂದರು. ಜೆಡಿಎಸ್‌ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಮಾತನಾಡಿ, ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಡಾ.ಸಯ್ಯದ್‌ ಮೋಹಿದ್‌ ಅಲ್ತಾಪ್‌ ಅವರನ್ನ ಘೋಷಣೆ ಮಾಡಿದರು. ಒಬ್ಬ ಉತ್ತಮ ವಿದ್ಯಾವಂತ ಅಭ್ಯರ್ಥಿಗೆ ಮತ ನೀಡುವಂತೆ ಜನರಲ್ಲಿ ಕೋರಿದರು. ಕಾರ್ಯಕ್ರಮದಲ್ಲಿ ಮಾಜಿ ಸಚಿವ ಬಂಡೆಪ್ಪ ಕಾಶೆಂಪುರ್, ಬೆಂಗಳೂರು ನಗರ ಜೆಡಿಎಸ್‌ ಅಧ್ಯಕ್ಷ ಪ್ರಕಾಶ್‌ ಹೆಬ್ಬಾಳದ ಅಧ್ಯಕ್ಷರಾದ ಎಸ್‌ ರುದ್ರಪ್ಪ‌, ಬಿಬಿಎಂಪಿ ಅಭ್ಯರ್ಥಿಗಳಾದ ಹಕೀಂ ಬಾಬು, ವಾರ್ಡ್‌ ನಂ 22 ರ ಮಾಜಿ ಬಿಬಿಎಂಪಿ ಸದಸ್ಯರಾದ ರಾಜಶೇಖರ್‌ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!