ಉಡುಪಿ: ಪ್ರವಾಹದ ಎಚ್ಚರಿಕೆ, ಮುಂಜಾಗೃತಾ ಕ್ರಮಕ್ಕೆ ಜಿಲ್ಲಾಡಳಿತ ಸೂಚನೆ

ಉಡುಪಿ: (ಉಡುಪಿ ಟೈಮ್ಸ್ ವರದಿ)ಜಿಲ್ಲೆಯಾದ್ಯಂತ ನಿರಂತರ ಮಳೆಯಾಗುತ್ತಿದ್ದು, ಕಾರ್ಕಳ ಎಣ್ಣೆಹೊಳೆ ಸ್ವರ್ಣ ನದಿಯಲ್ಲಿ ನೀರಿನ ಪ್ರಮಾಣ ಜಾಸ್ತಿಯಾಗಿ ತೀವ್ರ ಪ್ರವಾಹ ಉಂಟಾಗುವ ಸಂಭವವಿರುವುದಾಗಿ ದೆಹಲಿ ಕೇಂದ್ರ ಜಲ ಆಯೋಗ ಪ್ರವಾಹ ಮುನ್ಸೂಚನೆ ಮುನ್ಸೂಚನೆ ನೀಡಿರುತ್ತಾರೆ.

ಸ್ವರ್ಣ ನದಿಯ ಬಳಿಯ ಗ್ರಾಮಗಳಲ್ಲಿ ಎಚ್ಚರ ವಹಿಸುವುದು, ಹಾಗೂ ಎಲ್ಲಾ ಮುಂಜಾಗೃತಾ ಕ್ರಮಗಳನ್ನು ತೆಗೆದುಕೊಳ್ಳುವುದು, ಎಲ್ಲಾ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿದ್ದು ತಮ್ಮ ಮೊಬೈಲ್/ಕಛೇರಿ ದೂರವಾಣಿ/ವಾಹನ ಅಗತ್ಯ ಕ್ರಮಗಳನ್ನು ಸದಾ ಸನ್ನದ್ಧರಾಗಿರಿಸಿಕೊಂಡು ತಕ್ಷಣವೇ ಸ್ಪಂದಿಸುವಂತೆ ಆದೇಶಿಸಿದೆ.

ಈ ಬಗ್ಗೆ ಪ್ರವಾಹ ಪರಿಸ್ಥಿತಿ ಮತ್ತು ನಿರ್ವಹಣೆಯ ವರದಿ ಜಿಲ್ಲಾಡಳಿತಕ್ಕೆ ನೀಡಲು ಅಧಿಕಾರಿಗಳಿಗೆ ಸೂಚಿಸಿದೆ.

Leave a Reply

Your email address will not be published. Required fields are marked *

error: Content is protected !!