ಚೈತನ್ಯ ಸೋಶಿಯಲ್ ವೆಲ್ಫೇರ್ ಫೌಂಡೇಶನ್: ರೈನ್ ಕೋಟ್ ವಿತರಣೆ

ಉಡುಪಿ: ಚೈತನ್ಯ ಸೋಶಿಯಲ್ ವೆಲ್ಫೇರ್ ಫೌಂಡೇಶನ್ ವತಿಯಿಂದ ಉದ್ಯಾವರ, ಕಡೆಕಾರು ಮತ್ತು ಅಲೆವೊರು ಗ್ರಾಮ ಪಂಚಾಯತ್ ಸ್ವಚ್ಚತಾ ಸಿಬ್ಬಂದಿಗಳಿಗೆ ರೈನ್ ಕೋಟ್ ವಿತರಿಸಲಾಯಿತು.

ಚೈತನ್ಯ ಫೌಂಡೇಶನ್ ನ ಪ್ರವರ್ತಕರಾದ ಸುನೀಲ್ ಸಾಲ್ಯಾನ್ ಕಡೆಕಾರು ಮಾತನಾಡಿ ಸ್ವಚ್ಚತಾ ಸಿಬ್ಬಂದಿಗಳು ಗ್ರಾಮವನ್ನು ಸ್ವಚ್ಚವಾಗಿಡುವ ಶ್ರೇಷ್ಟ ಕೆಲಸವನ್ನು ಮಾಡುತ್ತಿದ್ದಾರೆ, ಅವರಿಗೆ ಮಳೆಗಾಲದಲ್ಲಿ ಕೆಲಸ ಮಾಡಲು ಅನುಕೂಲವಾಗುವ ನಿಟ್ಟಿನಲ್ಲಿ ರೈನ್ ಕೋಟ್ ಗಳನ್ನು ನೀಡುತ್ತಿದ್ದೇವೆ ಎಂದರು.

ಕಾರ್ತಿಕ್ ಗ್ರೂಪ್ ನ ಆಡಳಿತ ಪಾಲುದಾರರಾದ ಹರಿಯಪ್ಪ ಕೋಟ್ಯಾನ್, ಕಡೆಕಾರು ಗ್ರಾಮ ಪಂಚಾಯತ್ ಮಾಜಿ ಸದಸ್ಯ ಜತಿನ್ ಕಡೆಕಾರ್, ಡಾ. ಸಂತೋಷ್ ಕುಮಾರ್ ಬೈಲೂರು, ರಮೇಶ್ ಎಸ್.ಕೆ, ಸುಧಾಕರ್ ಭಂಡಾರಿ, ಹರೀಶ್ ಜತನ್ನ,  ಪಿ.ಡಿ.ಓ ಪ್ರವೀಣ್ ಡಿಸೋಜ, ದಿನೇಶ್ ಕಿಣಿ, ಮೊದಲಾದವರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *

error: Content is protected !!