ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ: ಸ್ನೇಹಿತರಿಬ್ಬರು ಪೊಲೀಸ ವಶಕ್ಕೆ

ಉಡುಪಿ ಎ.14 (ಉಡುಪಿ ಟೈಮ್ಸ್ ವರದಿ) : ರಾಜ್ಯದಾದ್ಯಂತ ಸಂಚಲನ ಸೃಷ್ಟಿಸಿದ್ದ ಬೆಳಗಾವಿ ಗುತ್ತಿಗೆದಾರ ಸಂತೋಷ್ ಪಾಟೀಲ್ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಸ್ನೇಹಿತರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ. 

ಉಡುಪಿಯ ಲಾಡ್ಜ್ ನಲ್ಲಿ ಸಂತೋಷ್ ಅವರು ರೂಂ ನಂಬರ್ 207 ರಲ್ಲಿ ಉಳಿದುಕೊಂಡಿದ್ದು, ಅವರ ಸ್ನೇಹಿತರಾದ ಪ್ರಶಾಂತ್ ಹಾಗೂ ಸಂತೋಷ್ ಅವರು 208 ರೂಂ. ನಂಬರ್ ನಲ್ಲಿ ಉಳಿದುಕೊಂಡಿದ್ದರು. ಇಬ್ಬರು ಸ್ನೇಹಿತರು ಬೆಂಗಳೂರು ಮತ್ತು ಕೊಡಗು ಮೂಲದವರಾಗಿದ್ದು, ಈಗಾಗಲೇ ಪೊಲೀಸರು ಈ ಇಬ್ಬರು ಸ್ನೇಹಿತರಿಂದ ಸಾಕಷ್ಟು ಮಾಹಿತಿ ಕಲೆ ಹಾಕಿದ್ದಾರೆ ಹಾಗೂ ಇಬ್ಬರಿಂದಲೂ ವಿವರಾದ ಹೇಳಿಕೆಗಳನ್ನು ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಘಟನೆ ಬಳಿಕ ಕಳೆದ ಎರಡು ದಿನಗಳಿಂದ ಇಬ್ಬರು ಸ್ನೇಹಿತರು ಎಲ್ಲೂ ಮಧ್ಯಮದ ಕಣ್ಣಿಗೆ ಬಿದ್ದಿರಲಿಲ್ಲ. ಆದರೆ ಮೃತ ಸಂತೋಷ್ ಪಾಟೀಲ್ ಅವರ ಸ್ಥಳ ಮಹಜರು ಮಾಡುವ ವೇಳೆ ಕೆಲ ಹೊತ್ತು ಸಾರ್ವಜನಿಕವಾಗಿ ಸ್ನೇಹಿತರು ಕಾಣಿಸಿಕೊಂಡಿದ್ದರು. ಸದ್ಯ ಪೊಲೀಸ್ ವಶದಲ್ಲಿರುವ ಇಬ್ಬರು ಸ್ನೇಹಿತರನ್ನು ಇಂದು ಅಥವಾ ನಾಳೆ ವಶದಿಂದ ಮುಕ್ತಗೊಳಿಸಲಾಗುತ್ತದೆ ಎನ್ನಲಾಗಿದೆ.

Leave a Reply

Your email address will not be published. Required fields are marked *

error: Content is protected !!