ಉಚ್ಚಿಲ: ದ್ವಿಚಕ್ರ ವಾಹನ ಕಳವು

ಪಡುಬಿದ್ರಿ‌ ಎ.12( ಉಡುಪಿ ಟೈಮ್ಸ್ ವರದಿ): ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಹೊರಬದಿಯ ದ್ವಾರದ ಬಳಿ ನಿಲ್ಲಿದ್ದ ಉತ್ಸವಕ್ಕೆ ಬಂದಿದ್ದ ಗಜೇಂದ್ರ ಎಂಬವರ ದ್ವಿಚಕ್ರ ವಾಹನವನ್ನು ಕಳವುಗೈದಿರುವ ಕುರಿತು ಪಡುಬಿದ್ರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಗಜೇಂದ್ರ ಅವರು ಎ.8 ರಂದು ಉಚ್ಚಿಲ ಶ್ರೀಮಹಾಲಕ್ಷ್ಮೀ ದೇವಸ್ಥಾನದ ಬ್ರಹ್ಮಕಲಶ ಉತ್ಸವಕ್ಕೆ ಬಂದು ತಮ್ಮ ದ್ವಿಚಕ್ರವನ್ನು ದೇವಸ್ಥಾನದ ಹೊರಬದಿಯ ದ್ವಾರದ ಬಳಿಯ ಪಾರ್ಕಿಂಗ್‌ ಸ್ಥಳದಲ್ಲಿ ನಿಲ್ಲಿಸಿ ಕೀಯನ್ನು ಅದರಲ್ಲಿಯೇ ಬಿಟ್ಟು ಬಂದಿದ್ದರು. ಈ ನಡುವೆ ದ್ವಿಚಕ್ರ ವಾಹನದಲ್ಲಿ ಕೀ ಬಿಟ್ಟಿರುವುದು ನೆನಪಾಗಿ ಕೀ ತರಲೆಂದು ವಾಪಾಸ್ಸು ಸ್ಕೂಟಿ ನಿಲ್ಲಿಸಿದ ಸ್ಥಳಕ್ಕೆ ಬಂದಾಗ ಸ್ಕೂಟಿ ಇಲ್ಲದೇ ಇರುವುದು ಗಮನಕ್ಕೆ ಬಂದಿದೆ. ಅದರಂತೆ ಕಳ್ಳರು ಸ್ಕೂಟಿಯನ್ನು ಕಳವು ಮಾಡಿದ್ದು, ಕಳವಾದ ಸ್ಕೂಟಿಯ ಮೌಲ್ಯ ರೂ.30,000 ಆಗಿರುತ್ತದೆ ಎಂಬುದಾಗಿ ನೀಡಿದ ದೂರಿನಂತೆ  ಪಡುಬಿದ್ರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!