ಲಯನ್ಸ್ ಕ್ಲಬ್ ಉಡುಪಿ ರಾಯಲ್: ಕರೋನಾ ವಾರಿಯರ್ಸ್ ಗಳಿಗೆ ಸನ್ಮಾನ

ಉಡುಪಿ: ಲಯನ್ಸ್ ಕ್ಲಬ್ ಉಡುಪಿ ರಾಯಲ್ ವತಿಯಿಂದ ಕರೋನಾ ವಾರಿಯರ್ಸಗಳಾಗಿ ಸೇವೆ ಸಲ್ಲಿಸುತ್ತಿರುವ ಕ್ಲಬ್ಬಿನ ಸದಸ್ಯರಾದ ಲ. ಡಾ. ಅಶೋಕ್ ಎಚ್. ಮತ್ತು ಲಯನ್ ಡಾ. ಸಂತೋಷ್ ಕುಮಾರ್ ಬೈಲೂರು ಅವರನ್ನು ಸನ್ಮಾನಿಸಲಾಯಿತು.ಮುಖ್ಯ ಅತಿಥಿಯಾಗಿ ಲಯನ್ಸ್ ಜಿಲ್ಲಾ ಪ್ರಥಮ ಉಪಜಿಲ್ಲಾ ಗವರ್ನರ್ ಲ. ವಿಶ್ವನಾಥ್ ಶೆಟ್ಟಿ , ಲ. ವಿನ್ಸೆಂಟ್ ಡಿಸೋಜ ಮತ್ತು ಲ. ಕಿಶೋರ್ ಕೆ ಉಪಸ್ಥಿತರಿದ್ದರು.

ಮುಖ್ಯ ಅತಿಥಿ ಲ. ವಿಶ್ವನಾಥ್ ಶೆಟ್ಟಿ ಮಾತಾನಾಡಿ ಕರೋನಾದ ಸಂಕಷ್ಟ ಪರಿಸ್ಥಿತಿಯಲ್ಲಿ ವೈದ್ಯರು ನೀಡುತ್ತಿರುವ ಸೇವೆಯನ್ನು ಶ್ಲಾಘಿಸಿದರು. ಕ್ಲಬ್ಬಿನ ಸದಸ್ಯರಾದ ಲ. ಸದಾಶಿವ ಬೈಲೂರು, ಲ. ಜೋಸೆಫ್ ರೆಬೆಲ್ಲೋ, ಲ. ಸುಧಾಕರ ಭಂಡಾರಿ ಉಪಸ್ಥಿತರಿದ್ದರು
ಕಾರ್ಯದರ್ಶಿ ಲ. ರಾಜೇಶ್ ಬಂಗೇರ ಸ್ವಾಗತಿಸಿದರು. ಕೋಶಾಧಿಕಾರಿ ಲ. ನಂದಕಿಶೋರ್ ವಂದಿಸಿದರು. ಲ. ಸುರೇಂದ್ರ ಶೆಟ್ಟಿ ಕೆ. ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

error: Content is protected !!