ಕುಂದಾಪುರ: ಪ್ರೀತಿಸಿ ಮದುವೆಯಾಗಿದ್ದ ಯುವಕ ಆತ್ಮಹತ್ಯೆ- ಕೊಲೆ ಶಂಕೆ ದೂರು

ಶಂಕರನಾರಾಯಣ ಅ.21(ಉಡುಪಿ ಟೈಮ್ಸ್ ವರದಿ): ವ್ಯಕ್ತಿಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಮನೆಯವರು ಕೊಲೆ ಶಂಕೆ ವ್ಯಕ್ತಪಡಿಸಿ ಪೊಲೀಸರಿಗೆ ದೂರು ನೀಡಿದ್ದಾರೆ.

ನಾಗರಾಜ (36) ಮೃತಪಟ್ಟವರು. ಈ ಬಗ್ಗೆ ಮೃತರ ಅಕ್ಕ ನಾಗರತ್ನ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಅದರಂತೆ ನಾಗರತ್ನ ಅವರ ತಮ್ಮ ನಾಗರಾಜ ಅವರು 10 ವರ್ಷಗಳ ಹಿಂದೆ ಕುಂದಾಪುರ ತಾಲೂಕಿನ ಅಂಪಾರು ಎಂಬಲ್ಲಿಯ ಮಮತಾ ಎಂಬವರನ್ನು ಪ್ರೀತಿಸಿ ಮದುವೆಯಾಗಿದ್ದರು. ಮದುವೆಯಾದ ಬಳಿಕ ಅವರು ಅಂಪಾರುವಿನ ಹೆಂಡತಿ ಮನೆಯಲ್ಲಿ ವಾಸವಾಗಿದ್ದರು.

ಅ.19 ರಂದು ಬೆಳಿಗ್ಗೆ ನಾಗರತ್ನ ಅವರ ಗಂಡ ಗಣಪತಿ ಅವರಿಗೆ ಯಾರೋ ಕರೆ ಮಾಡಿ ನಾಗರಾಜ ಅವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿಸಿದ್ದರು. ಅದರಂತೆ ದೂರುದಾರರು ಮತ್ತು ಅವರ ಸಂಬಂಧಿಕರು ಶಂಕರನಾರಾಯಣ ಸರಕಾರಿ ಆಸ್ಪತ್ರೆಯ ಶವಗಾರದಲ್ಲಿ ಇರಿಸಲಾದ ನಾಗರಾಜರವರ ಮೃತ ದೇಹವನ್ನು ನೋಡಿದಾಗ, ಮೃತದೇಹದ ಮೈ ಮೇಲೆ ಹಾಗೂ ಕುತ್ತಿಗೆಯಲ್ಲಿ ಗಾಯದ ಗುರುತುಗಳು ಪತ್ತೆಯಾಗಿದ್ದು ಕೊಲೆ ಶಂಕೆ ವ್ಯಕ್ತಪಡಿಸಿದ್ದಾರೆ.

ಮೃತ ನಾಗರಾಜ ಈ ಹಿಂದೆ ದೂರುದಾರರಲ್ಲಿ ಹಾಗೂ ಅವರ ಮನೆಯವರಲ್ಲಿ ಅವರು ಎಲ್ಲಾ ಸೇರಿ ಹಲ್ಲೆ ಮಾಡಲು ಬರುತ್ತಾರೆ ಎಂದು ಹೇಳಿದ್ದು, ಅದರಂತೆ ಮಮತಾ, ಕುಮಾರ್, ದಿನಕರ, ಚೇತನ ಹಾಗೂ ಆಕಾಶ್ ಎಂಬವರು ಸೇರಿ ನಾಗರಾಜ ಇವರನ್ನು ಕೊಲೆ ಮಾಡಿ, ಶರಾಬು ಸೇವನೆಯಿಂದ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಎಂದು ಸುಳ್ಳು ದೂರು ನೀಡಿ, ಬಳಿಕ ಊರಿನಲ್ಲಿಯೂ ನಾಗರಾಜ ಅವರು ಆತ್ಮಹತ್ಯೆ  ಮಾಡಿಕೊಂಡಿರುವುದಾಗಿ ಎಂದು ಸುಳ್ಳು ಸುದ್ದಿ ಹರಡಿರುವುದಾಗಿ ನೀಡಿದ ದೂರಿನಂತೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!