ಹೊರ ರಾಜ್ಯದವರು 100 ಕನ್ನಡ ಪದ ಬಳಕೆ ಮಾಡಿ- ಸಚಿವ ಸುನಿಲ್ ಕುಮಾರ್ ಮನವಿ

ಬೆಂಗಳೂರು ಅ.19: ರಾಜ್ಯದಲ್ಲಿರುವ ಹೊರ ರಾಜ್ಯದವರು 100 ಕನ್ನಡ ಪದ ಬಳಕೆ ಮಾಡಿ ಎಂದು ಇಂಧನ ಹಾಗೂ ಕನ್ನಡ ಸಂಸ್ಕøತಿ ಇಲಾಖೆ ಸಚಿವ ಸುನಿಲ್ ಕುಮಾರ್ ಅವರು ಮನವಿ ಮಾಡಿಕೊಂಡಿದ್ದಾರೆ.

ರಾಜ್ಯದಲ್ಲಿ ನ.1 ರಂದು ಆಚರಿಸುವ ಕನ್ನಡ ರಾಜ್ಯೋತ್ಸವದ ಕುರಿತು ಮಾಹಿತಿ ನೀಡಿದ ಅವರು, ಕನ್ನಡ ರಾಜ್ಯೋತ್ಸವ ಈ ಬಾರಿ ಒಂದು ವಾರಗಳ ಕಾಲ ನಡೆಯಲಿದ್ದು, ಒಂದು ವಾರ ಆರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಕನ್ನಡಕ್ಕಾಗಿ ನಾವು ಅಭಿಯಾನ ಮಾಡಬೇಕು. ಈ ನಿಟ್ಟಿನಲ್ಲಿ ಮಾತಾಡ್ ಮಾತಾಡ್ ಕನ್ನಡ ಕಾರ್ಯಕ್ರಮವನ್ನು ಅ.24 ರಿಂದ 30 ರವರೆಗೆ ನಡೆಸಬೇಕು. ರಂಗಾಯಣ ಹಾಗೂ ಅಕಾಡೆಮಿ ಬಳಸಿ ವಾರಗಳ ಕಾಲ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಬೇಕು. ಅ.28 ರಂದು ಕನಿಷ್ಠ ಮೂರು ಕನ್ನಡ ಗೀತೆಯನ್ನು, ಲಕ್ಷ ಕಂಠಗಳಲ್ಲಿ, ಒಂದು ಸಾವಿರದ ಕಡೆಗಳಲ್ಲಿ ಸಾಮೂಹಿಕ ಗಾಯನ ನಡೆಸಲಾಗುತ್ತದೆ. ವಿಧಾನಸೌಧ ಮೆಟ್ಟಿಲ ಮೇಲೆಯೂ ಇದು ನಡೆಯಲಿದೆ. ಲಂಡನ್ ನ ಬಸವ ಪ್ರತಿಮೆ ಸೇರಿ 16 ರಾಷ್ಟ್ರಗಳಲ್ಲಿ ಗಾಯನ ನಡೆಯಲಿದೆ ಎಂದರು.

ಈ ವೇಳೆ ಕನ್ನಡದಲ್ಲೇ ಮಾತನಾಡಿ, ವ್ಯವಹರಿಸಿ ಎಂದು ಹೇಳುವ ಮೂಲಕ ಕನ್ನಡದಲ್ಲೇ ಮಾತಾಡುತ್ತೇವೆ ಎಂಬ ಸಂಕಲ್ಪ ತೋಡೋಣ ಎಂದ ಅವರು, ಉದ್ಯೋಗ, ಶಿಕ್ಷಣದ ನಿಮಿತ್ತ ಹೊರ ರಾಜ್ಯದಿಂದ ಬಂದಿರುವವರು 100 ಪದ ಕನ್ನಡ ಬಳಸುವಂತೆ ಮನವಿ ಮಾಡಿಕೊಂಡಿದ್ದಾರೆ. ಹಾಗೂ ಆಡಳಿತದಲ್ಲಿ ಕನ್ನಡ ಮತ್ತಷ್ಟು ಪರಿಣಾಮಕಾರಿ ಮಾಡಬೇಕು ಎಂದ ಅವರು, ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ 4500 ಅರ್ಜಿ ಸಲ್ಲಿಕೆಯಾಗಿದ್ದು, ಅ. 28 ಅಥವಾ 29 ಕ್ಕೆ ಅಂತಿಮ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!