ಪ್ರಮೋದ್ ಮಧ್ವರಾಜ್ ಹುಟ್ಟುಹಬ್ಬ- ಬಬ್ಬುಸ್ವಾಮಿ ದೈವಸ್ಥಾನದಲ್ಲಿ ವಿಶೇಷ ಪೂಜೆ

ಉಡುಪಿ: ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರ ಹುಟ್ಟು ಹಬ್ಬದ ಸಲುವಾಗಿ ವಿಜಯ್ ಪುತ್ರನ್ ಹಿರೇಬೆಟ್ಟು ಇವರ ಮುಂದಾಳತ್ವದಲ್ಲಿ ಪ್ರಮೋದ್ ಮಧ್ವರಾಜ್ ಅಭಿಮಾನಿಗಳು ಹಾಗೂ ಅಧ್ಯಕ್ಷರು ಆಟೋ ಚಾಲಕರು ಮತ್ತು ಮಾಲಕರ ಸಂಘ ಮತ್ತು ಸದಸ್ಯರುಗಳ ಸಹಭಾಗಿತ್ವದಲ್ಲಿ ಬಬ್ಬುಸ್ವಾಮಿ ದೈವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.

ಮುಖ್ಯ ಅತಿಥಿಯಾಗಿ ಡಾ. ಪದ್ಮರಾಜ ಹೆಗ್ಡೆ ಅವರು ಅಭಿಮಾನಿಗಳ ಪರವಾಗಿ ಕಾಮಧೇನುವಿನ ಸ್ಮರಣಿಕೆಯನ್ನು ನೀಡಿ  ಗೌರವಿಸಿದರು. ಈ ಸಂದರ್ಭ ಉಡುಪಿ ನಗರ ಸಭೆ ಮಾಜಿ ಉಪಾಧ್ಯಕ್ಷ ಕುಶಾಲ್ ಶೆಟ್ಟಿ, ಉಡುಪಿ ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಮಮತ ಶೆಟ್ಟಿ, ಸತ್ಯಪ್ರಬಾ, ಪ್ರಸಾದ್ ರೈ, ಸುಕೇಶ್ ಕುಂದರ್, ವಿಶ್ವಾಸ್ ಅಮೀನ್, ನವೀನ್ ಸಾಲಿಯಾನ್, ಹರೀಶ್ ಕಾಂಚನ್, ಸಂತೋಷ್ ಶೆಟ್ಟಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!