ಮೀನುಗಾರಿಕಾ ಮತ್ತು ಮೀನು ಉತ್ಪನ್ನ ಸಾಮಾಗ್ರಿಗಳ ಸಹಕಾರ ಸಂಘ ಪಿತ್ರೋಡಿ: ಮಲ್ಪೆಯಲ್ಲಿ ಡೀಸೆಲ್ ಬಂಕ್ ಉದ್ಘಾಟನೆ
ಉದ್ಯಾವರ ಅ.18 (ಉಡುಪಿ ಟೈಮ್ಸ್ ವರದಿ): ಮೀನುಗಾರಿಕಾ ಮತ್ತು ಮೀನು ಉತ್ಪನ್ನ ಸಾಮಾಗ್ರಿಗಳ ಸಹಕಾರ ಸಂಘ, ಉದ್ಯಾವರದ ಪಿತ್ರೋಡಿಯ ಮೀನುಗಾರರ ಸೌಧದ ನೂತನ ಡೀಸೆಲ್ ಬಂಕ್ ಮಲ್ಪೆಯ ಬಾಪು ತೋಟದಲ್ಲಿ ಉದ್ಘಾಟನೆಗೊಂಡಿತು.
ನೂತನ ಡೀಸೆಲ್ ಬಂಕ್ ನ್ನು ಕಾಪು ಶಾಸಕ ಲಾಲಾಜಿ ಮೆಂಡನ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಸಹಕಾರಿ ಸಂಸ್ಥೆಗಳು ಬೆಳೆಯಬೇಕಾದರೆ ಜನರ ಸಹಕಾರ ಅತೀ ಅಗತ್ಯವಾಗಿದೆ. ಪಿತ್ರೋಡಿಯ ಮೀನುಗಾರಿಕಾ ಮತ್ತು ಮೀನು ಉತನ್ನ ಸಾಮಗ್ರಿಗಳ ಸಹಕಾರ ಸಂಘವು ಮೀನುಗಾರಿಕೆಗೆ ಪೂರಕವಾಗಿ ಸ್ಪಂದಿಸುವ ಮೂಲಕ ಮೀನುಗಾರರಿಗೆ ಆಶಾಕಿರಣವಾಗಿದೆ. ಇದೀಗ ನೂತನ ಡೀಸೆಲ್ ಪಂಪ್, ತೆರೆಯುವ ಮೂಲಕ ಮೀನುಗಾರರಿಗೆ ಮತ್ತಷ್ಟು ಅನೂಕೂಲತೆಯನ್ನು ಒದಗಿಸಿದಂತಾಗಿದೆ. ಮುಂದಿನ ದಿನಗಳಲ್ಲಿ ತನ್ನ ಕಾರ್ಯ ಕ್ಷೇತ್ರವನ್ನು ವಿಸ್ತರಿಸುವ ಮೂಲಕ ಇನ್ನಷ್ಟು ಪ್ರಗತಿಯನ್ನು ಸಾಧಿಸುವಂತಾಗಲಿ ಎಂದು ಹಾರೈಸಿದರು
ಈ ವೇಳೆ ಸಹಕಾರ ಸಂಘದ ಅಧ್ಯಕ್ಷ ಗಿರೀಶ್ ವಿ ಸುವರ್ಣ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಕಾರ್ತಿಕ್ ಸಮೂಹ ಸಂಸ್ಥೆಯ ಮುಖ್ಯಸ್ಥ ಹರಿಯಪ್ಪ ಕೋಟ್ಯಾನ್, ಭಾರತೀಯ ಸ್ಟೇಟ್ ಬ್ಯಾಂಕ್ನ ಪ್ರಾದೇಶಿಕ ವ್ಯವಸ್ಥಾಪಕ ತರುಣ್ ಫಾಯ್ದೆ, ನ್ಯಾಯವಾದಿ ಎಸ್. ಗುರುರಾಜ್ ಐತಾಳ್, ಉದ್ಯಾವರ ಹದಿನಾಲ್ಕು ಪಟ್ನ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಕೇಶವ ಎಂ. ಕೋಟ್ಯಾನ್, ಮಲ್ಪೆ ಮೀನು ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಸಾಧು ಸಾಲ್ಯಾನ್, ಮಲ್ಪೆ ಕನ್ನಿ ಮೀನುಗಾರರ ಸಂಘದ ಅಧ್ಯಕ್ಷ ದಯಾಕರ ವಿ. ಸುವರ್ಣ, ಡಿ.ಜೆ. ಕನ್ಸಸ್ಟ್ರಕ್ಷನ್ ನ ಸದಾನಂದ ಮೆಂಡನ್, ಉದ್ಯಾವರ ಗ್ರಾ. ಪಂ.ನ ಅಧ್ಯಕ್ಷ ರಾಧಾಕೃಷ್ಣ ಶ್ರೀಯಾನ್, ಸಂಘದ ಉಪಾಧ್ಯಕ್ಷ ವೇಣುಗೋಪಾಲ ತಿಂಗಳಾಯ, ಸಿಇಒ ಪ್ರಮುಕ್ತ ಸುನೀಲ್ ಕರ್ಕೇರ, ನಿರ್ದೇಶಕರಾದ ಸುಂದರ ಕೋಟ್ಯಾನ್, ಶೇಖರ್ ಸಾಲ್ಯಾನ್, ಐತಪ್ಪ ಕೋಟ್ಯಾನ್, ಗಂಗಾಧರ್ ಕರ್ಕೇರ, ನವೀನ್ ಸಾಲ್ಯಾನ್, ಮಾಲತಿ ಸಂದೀಪ್, ಪೂರ್ಣಿಮಾ ವಿ. ಪುತ್ರನ್, ಗಿರೀಶ್ ವಿ. ಸುವರ್ಣ, ಪ್ರಶಾಂತ್ ಶೆಟ್ಟಿ ಉಪಸ್ಥಿತರಿದ್ದರು.