ಕುಂದಾಪುರ: ಮನೆ ಕೆಡವಿ ಹಲ್ಲೆ

ಕುಂದಾಪುರ (ಉಡುಪಿ ಟೈಮ್ಸ್ ವರದಿ): ಸಂಬಂಧಿಕರೇ ಮನೆಯನ್ನು ಕೆಡವಿ ಮನೆಯವರಿಗೆ ಹಲ್ಲೆ ನಡೆಸಿರುವ ಘಟನೆ ಕುಂದಾಪುರದ ಹಟ್ಟಿಯಂಗಡಿ ಗ್ರಾಮದಲ್ಲಿ ನಡೆದಿದೆ.

ಈ ಬಗ್ಗೆ ಪ್ರಭಾವತಿ ಎಂಬುವವರು ಪೊಲೀಸರಿಗೆ ದೂರು ನೀಡಿದ್ದು ಅದರಂತೆ ಅ.12 ರಂದು ಪ್ರಭಾವತಿ ಅವರು ಮನೆಯಲ್ಲಿದ್ದ ವೇಳೆ ಬೆಳಿಗ್ಗೆ 7 ಗಂಟೆ ಸುಮಾರಿಗೆ ಪ್ರಭಾವತಿ ಅವರ ತಾಯಿಯ ಅಣ್ಣನ ಮಗ ಶ್ರೀನಿವಾಸ ಶೆಟ್ಟಿ ಎಂಬುವವರು ಮನೆಯನ್ನು ಧ್ವಂಸಗೊಳಿಸಲು ಬಂದಿದ್ದರು.

ಈ ವೇಳೆ ಪ್ರಭಾವತಿ ಅವರು ತಡೆದಾಗ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿದ್ದಾರೆ. ನಂತರ ಪ್ರಭಾವತಿ ಅವರ ಮನೆ ಸಂಪೂರ್ಣ ನೆಲಸಮ ಮಾಡಿ ಹಾನಿಗೊಳಿಸಿರುತ್ತಾನೆ. ಈ ಕೃತ್ಯಕ್ಕೆ ಶ್ರೀನಿವಾಸ ಶೆಟ್ಟಿಯ ತಂದೆ ಸೀತಾರಾಮ ಶೆಟ್ಟಿಯವರ ಕುಮ್ಮಕ್ಕೆ ಕಾರಣವಾಗಿರುವುದಾಗಿ ನೀಡಿದ ದೂರಿನಂತೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!