ಕಾರ್ಕಳ: ಮತ್ತೆ ಮುಂದುವರಿದ ಗೋ ಕಳ್ಳತನ
ಕಾರ್ಕಳ ಅ.16(ಉಡುಪಿ ಟೈಮ್ಸ್ ವರದಿ): ಮೇಯಲು ಬಿಟ್ಟಿದ್ದ ದನವನ್ನು ಯಾರೋ ಕಳ್ಳರು ಕಳವು ಮಾಡಿರುವ ಘಟನೆ ಕಾರ್ಕಳ ತಾಲೂಕಿನ ಪಳ್ಳಿ ಗ್ರಾಮದಲ್ಲಿ ನಡೆದಿದೆ.
ಈ ಬಗ್ಗೆ ಅಶೋಕ ನಾಯಕ್ ಎಂಬವರು ಪೊಲೀಸರಿಗೆ ದೂರು ನೀಡಿದ್ದಾರೆ. ಅದರಂತೆ. ಅ.14 ರಂದು ಎಂದಿನಂತೆ ಅಶೋಕ್ ರವರು, ದನವನ್ನು ಹಟ್ಟಿಯಿಂದ ಮೇಯಲು ಬಿಟ್ಟಿದ್ದರು. ಆದರೆ ಅಂದು ರಾತ್ರಿ ದನ ಮನೆಗೆ ವಾಪಾಸ್ಸು ಬಂದಿರುವುದಿಲ್ಲ. ಆದ ಕಾರಣ ಅ.15 ರಂದು ಅಶೋಕ್ ನಾಯಕ್ ಅವರು ಪಳ್ಳಿ ಪೇಟೆಯಲ್ಲಿ ಎಲ್ಲಾ ಕಡೆಗಳಲ್ಲಿ ಹುಡುಕಾಡಿದ್ದಾರೂ ದನ ಪತ್ತೆಯಾಗಿಲ್ಲ. ಕಳವಾದ ದನವು 25,000 ರೂ ಮೌಲ್ಯದ ದೇಶಿ ತಳಿಯಾಗಿದ್ದು, ದನ ಮೇಯಲು ಬಿಟ್ಟಿದ್ದ ವೇಳೆ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವ ಸಾಧ್ಯತೆ ಇದೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಹಾಗೂ 15 ರಂದು ಕಾರ್ ವೊಂದು ಪಳ್ಳಿ ಪೆಟ್ರೋಲ್ ಪಂಪ್ ಬಳಿ ಅನುಮಾನಾಸ್ಪದ ರೀತಿಯಲ್ಲಿ ಸ್ವಲ್ಪ ಸಮಯ ನಿಂತಿದ್ದು ಬಳಿಕ ಕಾರು ಉಡುಪಿ ಕಡೆಗೆ ತೆರಳಿರುವ ದೃಶ್ಯಾವಳಿಗಳು ಪೆಟ್ರೋಲ್ ಪಂಪ್ನ ಸಿಸಿ ಟಿವಿ ಕ್ಯಾಮೇರಾದಲ್ಲಿ ಸೆರೆಯಾಗಿರುವುದನ್ನು ನೋಡಿರುವುದಾಗಿ ಅಶೋಕ ನಾಯಕ್ ಹಾಗೂ ಅವರ ಗೆಳೆಯ ತಿಳಿಸಿರುವಂತೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.