ಏರ್ ಇಂಡಿಯಾ ಬಂಡವಾಳ ಹೂಡಿಕೆ ಅನುಮೋದನೆ- ಮಾಧ್ಯಮಗಳ ವರದಿ ತಳ್ಳಿ ಹಾಕಿದ ಕೇಂದ್ರ

ನವದೆಹಲಿ, ಅ.1: ಏರ್ ಇಂಡಿಯಾ ಬಂಡವಾಳ ಹೂಡಿಕೆ ಅನುಮೋದನೆ ನೀಡಿರುವ ಬಗ್ಗೆ ಮಾಧ್ಯಮಗಳ ವರದಿಯನ್ನು ಕೇಂದ್ರ ಸರ್ಕಾರವು ತಳ್ಳಿ ಹಾಕಿದೆ.

ರಾಷ್ಟ್ರೀಯ ವಿಮಾನಯಾನ ಏರ್ ಇಂಡಿಯಾವನ್ನು ಖರೀದಿ ಸಂಬಂಧ ನಡೆದ ಬಿಡ್ ಅಂತಿಮವಾಗಿ ಟಾಟಾ ಸನ್ಸ್ ಪಾಲಾಗಿದೆ. ಅಮಿತ್ ಶಾ ನೇತೃತ್ವದ ಸಮಿತಿಯ ಅನುಮೋದನೆಯ ಬಳಿಕ ಘೋಷಣೆ ಮಾಡಲಾಗುವುದು ಎಂದು ಸರ್ಕಾರಿ ಮೂಲಗಳು ತಿಳಿಸಿವೆ ಎಂಬುದಾಗಿ ವರದಿಯಾಗಿತ್ತು. ಈ ಬಗ್ಗೆ ಟ್ವೀಟ್ ಮಾಡಿರುವ ಹೂಡಿಕೆ ಹಾಗೂ ಸಾರ್ವಜನಿಕ ಆಸ್ತಿ ನಿರ್ವಹಣಾ ಇಲಾಖೆ “ಏರ್ ಇಂಡಿಯಾ ಮರುಹೂಡಿಕೆಗೆ ಕೇಂದ್ರ ಸರ್ಕಾರವು ಬಿಡ್ ಸಲ್ಲಿಸಲು ಅನುಮೋದನೆ ನೀಡಿರುವ ಬಗ್ಗೆ ಮಾಧ್ಯಮಗಳ ವರದಿಯು ತಪ್ಪಾಗಿದೆ. ಕೇಂದ್ರ ಸರ್ಕಾರದ ನಿರ್ಧಾರಗಳ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಲಾಗುತ್ತದೆ ಎಂದು ಬರೆದು ಕೊಂಡಿದೆ.

ತಮ್ಮ ಖಾಸಗಿ ಸಾಮಥ್ರ್ಯದಲ್ಲಿ ಟಾಟಾ ಗ್ರೂಪ್ ಹಾಗೂ ಸ್ಪೈಸ್ ಜೆಟ್ ಅಧ್ಯಕ್ಷ ಅಜಯ್ ಸಿಂಗ್ ಸಾಲದ ಹೊರೆಯಿರುವ ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಏರ್ ಇಂಡಿಯಾಕ್ಕಾಗಿ ಈ ತಿಂಗಳ ಪ್ರಾರಂಭದಲ್ಲಿ ಬಿಡ್ ಮಾಡಿದ್ದರು. ಆದರೆ, ಕೊರೊನಾ ಕಾರಣದಿಂದ ಷೇರು ಮಾರಾಟ ಪ್ರಕ್ರಿಯೆ ವಿಳಂಬಗೊಂಡಿತ್ತು. ಸಾಲದ ಸುಳಿಯಲ್ಲಿರುವ ಏರ್ ಇಂಡಿಯಾ ವಿಮಾನಯಾನ ಸಂಸ್ಥೆಯನ್ನು ಸ್ವಾಧೀನಪಡಿಸಿಕೊಳ್ಳಲು ನಾಲ್ಕು ಬಿಲ್ಡರ್‍ಗಳು ಸ್ಪರ್ಧಿಸಿದ್ದರು. ಆದರೆ ಅಜಯ್ ಸಿಂಗ್ ಅವರು ಮಾತ್ರವೇ ಅಂತಿಮ ಹಂತಕ್ಕೆ ಬಂದಿದ್ದರು.

ಏರ್ ಇಂಡಿಯಾವು 70,000 ಕೋಟಿಗೂ ಹೆಚ್ಚು ನಷ್ಟದಲ್ಲಿದೆ ಹಾಗೂ ಸರ್ಕಾರವು ಪ್ರತಿದಿನ ರಾಷ್ಟ್ರೀಯ ವಾಹಕವನ್ನು ನಡೆಸಲು 20 ಕೋಟಿ ಕಳೆದುಕೊಳ್ಳುತ್ತಿದೆ. 1990ರ ದಶಕದಲ್ಲಿ ಖಾಸಗಿ ವಿಮಾನಯಾನ ಸಂಸ್ಥೆಗಳ ಆಗಮನ ಹಾಗೂ 2000ರ ದಶಕದ ಮಧ್ಯ ಭಾಗದಲ್ಲಿ ವಿಮಾನಯಾನ ಸಂಸ್ಥೆಗಳ ಪ್ರವೇಶ ಏರ್ ಇಂಡಿಯಾವನ್ನು ನಷ್ಟದಲ್ಲಿ ಮುಳುಗುವಂತೆ ಮಾಡಿತ್ತು.

Leave a Reply

Your email address will not be published. Required fields are marked *

error: Content is protected !!