ನೀವು ಹೋರಾಟಗಾರ್ತಿಯಲ್ಲ, ಹಾರಾಟಗಾರ್ತಿ ಅಷ್ಟೇ!- ಶೋಭಾ ಕರಂದ್ಲಾಜೆಯ ಟೀಕೆ ಕಾಂಗ್ರೆಸ್

ಬೆಂಗಳೂರು, ಆ. 27: ಕಾಂಗ್ರೆಸ್ ಸರಕಾರವಿರುವಾಗ ಎಲ್ಲಿಯೇ ಕೊಲೆ ನಡೆಯಲಿ, ಸುಲಿಗೆ ನಡೆಯಲಿ, ಅತ್ಯಾಚಾರ ನಡೆಯಲಿ ಅಲ್ಲಿಗೆ ರಣಹದ್ದುಗಳಂತೆ ಹಾರಿಬಂದು ಸರಕಾರವೇ ಕಾರಣವೆಂದು ಎಗರಿ ಬೀಳುತ್ತಿದ್ದಿರಲ್ಲ ಶೋಭಾ ಕರಂದ್ಲಾಜೆ ಅವರೇ,
ಉತ್ತರದಾಯಿತ್ವದ ಸ್ಥಾನ ಸಿಕ್ಕಮೇಲೆ ಬಾಯಿ ಮುಚ್ಚಿಕೊಳ್ಳುವ ನೀವು ಹೋರಾಟಗಾರ್ತಿಯಲ್ಲ, ಹಾರಾಟಗಾರ್ತಿ ಅಷ್ಟೇ!’ ಎಂದು ಕಾಂಗ್ರೆಸ್ ಲೇವಡಿ ಮಾಡಿದೆ.

ಶುಕ್ರವಾರ ಸರಣಿ ಟ್ವಿಟ್ ಮಾಡಿರುವ ಕಾಂಗ್ರೆಸ್, `ಪ್ರವಾಸಿ ತಾಣದ ಬಳಿಯೇ ಪೊಲೀಸ್ ರಕ್ಷಣೆ ಇಲ್ಲದಿರುವುದು ಒಂದು ವೈಫಲ್ಯ ವಾದರೆ, ಮೂರು ದಿನಗಳು ಕಳೆದರೂ ಆರೋಪಿಗಳನ್ನು ಹಿಡಿಯಲಾಗದ್ದು ಮತ್ತೊಂದು ವೈಫಲ್ಯ. ತಮ್ಮ ವೈಫಲ್ಯ ಮರೆಮಾಚಲು ರಮೇಶ್ ಜಾರಕಿಹೊಳಿ ಪ್ರಕರಣದ ಸಂತ್ರಸ್ತೆಯಂತೆ ಈ ಸಂತ್ರಸ್ತೆಯನ್ನೂ ಆರೋಪಿ ಸ್ಥಾನದಲ್ಲಿ ನಿಲ್ಲಿಸುತ್ತಿದೆ ದುಷ್ಟ ಬಿಜೆಪಿ ಸರಕಾರ’ ಎಂದು ಟೀಕಿಸಿದೆ.

ಬಿಜೆಪಿಯವರು ಬಡ ಮಕ್ಕಳ ಮೊಟ್ಟೆ ತಿನ್ನಬಹುದು, ಬಿಜೆಪಿಯವರು ಬಡಮಕ್ಕಳ ಸೈಟರ್ ನುಂಗಬಹುದು, ಬಿಜೆಪಿಯವರು ಬಳ್ಳಾರಿಯ ಮಣ್ಣು, ಬೆಂಗಳೂರಿನ ನೆಲವನ್ನ ತಿನ್ನಬಹುದು, ಬಿಜೆಪಿಯವರು ಲೂಟಿಯ ಹಣ ತಿನ್ನಬಹುದು, ಬಿಜೆಪಿಯ ಉಮೇಶ್ ಕತ್ತಿ ಸದನದಲ್ಲಿ ಗುಟ್ಕಾ ತಿನ್ನಬಹುದು. ಆದರೆ, ಬಡಜನತೆ ಮಾತ್ರ 5 ಕೆಜಿಗಿಂತ ಹೆಚ್ಚು ಅಕ್ಕಿ ತಿನ್ನಬಾರದು! ಎಂದು ಆಹಾರ ಸಚಿವ ಉಮೇಶ್ ಕತ್ತಿ ಹೇಳಿಕೆಗೆ ಕಾಂಗ್ರೆಸ್ ಟ್ವಿಟ್ ಮೂಲಕ ತಿರುಗೇಟು ನೀಡಿದೆ

1 thought on “ನೀವು ಹೋರಾಟಗಾರ್ತಿಯಲ್ಲ, ಹಾರಾಟಗಾರ್ತಿ ಅಷ್ಟೇ!- ಶೋಭಾ ಕರಂದ್ಲಾಜೆಯ ಟೀಕೆ ಕಾಂಗ್ರೆಸ್

  1. ಒಂದನ್ನು ಬಿಟ್ಟು ಹೋಗಿದೆ, ಮುಖ್ಯ ಮಂತ್ರಿಗಳ ಮಕ್ಕಳು ಅರ್.ಟಿ.ಜಿ.ಎಸ್ ಮುಖಾಂತರ ಕೋಟಿಗಟ್ಟಲೆ ಹಣ ಲಂಚ ಪಡೆಯಬಹುದು ಪ್ರಶ್ನೆಮಾಡಿದರೆ ಟಿವಿ ಚಾನೆಲ್ ಮುಚ್ಚಿಸಬಹುದು ಇದೆಲ್ಲ ಕಾಮಾಗಾರಿಯನ್ನು ಮಾಡಲು ಬಿಜೆಪಿ ಪಕ್ಷಕ್ಕೆ ಅಧಿಕಾರ

Leave a Reply

Your email address will not be published. Required fields are marked *

error: Content is protected !!