ಉಡುಪಿ: ಆತ್ಮಹತ್ಯೆ ಮಾಡಲು ಹೋಗಿದ್ದ ವ್ಯಕ್ತಿಯ ಮನ ಪರಿವರ್ತಿಸಿದಳ ಶೃಂಗೇರಿ ಶಾರದೆ!

ಉಡುಪಿ: ಸರಿಯಾಗಿ ಕೆಲಸವಿಲ್ಲದ್ದಕ್ಕೆ ನೊಂದು ಮನೆಬಿಟ್ಟು ಹೋಗಿದ್ದ ಅಕೌಂಟೆಂಟ್’ವೋರ್ವರು ಜುಲೈ 28 ರಂದು ಮಾರ್ಪಳ್ಳಿಯ ಮನೆಯಿಂದ ನಾಪತ್ತೆಯಾಗಿದ್ದ ಬಗ್ಗೆ ಪತ್ನಿ ಉಡುಪಿ ನಗರ ಠಾಣೆಗೆ ದೂರು ನೀಡಿದ್ದರು.

ದಿನನಿತ್ಯದಂತೆ ಕೆಲಸಕ್ಕೆಂದು ಬುಧವಾರ ಹೋದ ಕೃಷ್ಣ ಶೇರಿಗಾರ್, ರಾತ್ರಿಯಾದರೂ ಮನೆಗೆ ಬಾರದ ಇರುವುದರಿಂದ ಮನೆಮಂದಿ ಹೆದರಿ ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಿಸಿದ್ದರು.

ಕೃಷ್ಣ ಶೇರಿಗಾರ್ ಮನೆಯಿಂದ ಹೋಗುವಾಗ, ಪರ್ಸ್, ಮೊಬೈಲ್ ಬಿಟ್ಟಿರುವುದರಿಂದ ಗಾಬರಿಗೊಂಡಿದ್ದರು. ಇತ್ತೀಚಿನ ದಿನಗಳಲ್ಲಿ ಸರಿಯಾದ ಕೆಲಸವಿಲ್ಲದಕ್ಕೆ ಚಿಂತೆಯಲ್ಲಿದ್ದರು, ಮನೆ ನಿರ್ವಹಣೆ ಮತ್ತು ಮಕ್ಕಳ ಶಾಲಾ ಫೀಸ್ ಭರಿಸುವ ಒತ್ತಡಲ್ಲಿದ್ದರು ಎನ್ನಲಾಗಿದೆ.

ಜೀವನದಲ್ಲಿ ಇನ್ನೇನು ಮಾಡಲು ಸಾಧ್ಯವಿಲ್ಲ ಎಂದು, ಆತ್ಮಹತ್ಯೆ ಒಂದೇ ದಾರಿ ಎಂದು ಮನೆಯಿಂದ ಹೊರಟವರು ನೇರವಾಗಿ ಶೃಂಗೇರಿ ಶಾರದಾಂಬೆಯ ಸನ್ನಿದಿಗೆ ಹೋಗಿದ್ದರು. ರಾತ್ರಿ ಇಡಿ ದೇವಸ್ಥಾನದಲ್ಲಿ ಕಳೆದ ಇವರ ಮನ ಪರಿವರ್ತನೆಯಾಗಿ ನೇರವಾಗಿ ಉಡುಪಿ ಬಂದಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!