ಉಡುಪಿ: ಅಕೌಂಟೆಂಟ್ ನಾಪತ್ತೆ
ಉಡುಪಿ ಜು.29(ಉಡುಪಿ ಟೈಮ್ಸ್ ವರದಿ): ವ್ಯಕ್ತಿಯೊಬ್ಬರು ನಾಪತ್ತೆಯಾಗಿರುವ ಘಟನೆ ಉಡುಪಿಯಲ್ಲಿ ನಡೆದಿದೆ.
ಮಾರ್ಪಳ್ಳಿ ಕೃಷ್ಣ ಸೇರಿಗಾರ್ (57) ನಾಪತ್ತೆಯಾದವರು. ಇವರು ಮಣಿಪಾಲ ಬೇಕರಿಯಲ್ಲಿ ಹಾಗೂ ಉಡುಪಿಯ ಸೈಕಲ್ ಶಾಪ್ ನಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡಿಕೊಂಡಿದ್ದರು.
ಜು.28 ರಂದು ಎಂದಿನಂತೆ ಬೆಳಿಗ್ಗೆ ಕೆಲಸದ ನಿಮಿತ್ತ ಮನೆಯಿಂದ ಹೋಗಿದ್ದರು. ಮಣಿಪಾಲ ಬೇಕರಿಯಲ್ಲಿ ಕೆಲಸ ಮುಗಿಸಿ ಮಧ್ಯಾಹ್ನ 1:30 ರ ವೇಳೆಗೆ ಅಲ್ಲಿಂದ ಹೊರಟು ಬಂದವರು ಮನೆಗೆ ಬಾರದೇ, ಅಂತೋನಿ ಸೈಕಲ್ ಶಾಪ್ ಹಾಗೂ ಸಂಬಂಧಿಕರ ಮನೆಗೂ ಹೋಗದೇ ಕಾಣೆಯಾಗಿದ್ದಾರೆ.
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಕೃಷ್ಣ ಸೇರಿಗಾರ್ ಅವರ ಪತ್ನಿ ಸುಜಾತ ಅವರು ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.