ಕುಂದಾಪುರ: ಅಕ್ರಮ ಕಸಾಯಿಖಾನೆಗೆ ದಾಳಿ – 7 ಮಂದಿ ವಶಕ್ಕೆ

ಕುಂದಾಪುರ ಜು.22: ಅಕ್ರಮ ಖಸಾಯಿ ಖಾನೆಗೆ ದಾಳಿ ನಡೆಸಿದ ಪೊಲೀಸರು 7 ಮಂದಿಯನ್ನು ವಶಕ್ಕೆ ಪಡೆದುಕೊಂಡ ಘಟನೆ ಕಾವ್ರಾಡಿ ಗ್ರಾಮದಲ್ಲಿ ನಡೆದಿದೆ. 

ಅಪ್ತಾಬ್ ಯಾನೆ ಗೊದ್ದ, ಕರಾಣಿ ಬಿಲಾಲ್, ಕರಾಣಿ ನದೀಮ್, ರಿಯಾನ್, ಸಲ್ಮಾನ, ತನ್ವೀಜ್, ಅರ್ಪಾದ್ ಬಂಧಿತ ಆರೋಪಿಗಳು.
ಖಚಿತ ಮಾಹಿತಿ ಮೇರೆಗೆ, ಕಾವ್ರಾಡಿ ಗ್ರಾಮದ  ಕಂಡ್ಲೂರು ಜೆ.ಎಮ್‌ ರಸ್ತೆಯಲ್ಲಿ ರಿಯಾನ್‌ ಎಂಬವರ ಮನೆಯ ಬಳಿ ಅಕ್ರಮವಾಗಿ ಕಾರ್ಯಚರಿಸುತ್ತಿದ್ದ ಖಸಾಯಿ ಖಾನೆಗೆ ದಾಳಿ ನಡೆಸಿದ  ಕುಂದಾಪುರ ಗ್ರಾಮಾಂತರ ಠಾಣೆಯ ಪೊಲೀಸರು ಸ್ಥಳದಲ್ಲಿ ಇದ್ದ ಅಂದಾಜು 2400 ರೂ ಮೌಲ್ಯದ 12 ಕೆಜಿ ದನದ ಮಾಂಸ ಹಾಗೂ ಮಾಂಸ ಮಾಡಲು ಬಳಸಿದ ಸಲಕರಣೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!