ನನ್ನನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದ್ದು 17 ಶಾಸಕರಲ್ಲ- ಆ ದೇವರೇ ಕೆಳಗಿಳಿಸಿದ್ದು: ಹೆಚ್ಡಿಕೆ

ಬೆಂಗಳೂರು, ಜು 01: ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾಗಲು ಕಾಂಗ್ರೆಸ್‌ ಕಾರಣ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರ ಸ್ವಾಮಿ ಹೇಳಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು, ಮೈತ್ರಿ ಸರ್ಕಾರದ ಸಂದರ್ಭ ಸಿಎಂ ಸ್ಥಾನದಿಂದ ನನ್ನನ್ನು ಕೆಳಗಿಳಿಸಿದ್ದು ಆ 17 ಶಾಸಕರಲ್ಲ. ನನ್ನನ್ನು ಆ ದೇವರೇ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿ ಈ ರೀತಿಯ ಸರ್ಕಾರದಲ್ಲಿ ಇರುವುದು ಬೇಡ ಎಂದು ಕಾಪಾಡಿದ್ದಾನೆ.

ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾಗಲು ಕಾಂಗ್ರೆಸ್‌ ಕಾರಣವೇ ಹೊರತು ಜಾತ್ಯಾತೀತದ ವಾದದಿಂದ ಅಲ್ಲ ಎಂದಿದ್ದಾರೆ.
“ರಾಜ್ಯದಲ್ಲಿ ಜೆಡಿಎಸ್‌ ಪಕ್ಷವೇ ಇಲ್ಲ, ಜೆಡಿಎಸ್‌ ಅನ್ನು ಮುಗಿಸಿದ್ದೇವೆ ಎನ್ನುವ ಹೇಳಿಕೆ ನೀಡುತ್ತಿದ್ದಾರೆ. ಮೊದಲು ಅಧಿವೇಶನ ಕರೆಯಲಿ ಆ ವೇಳೆ ಜೆಡಿಎಸ್‌ ಏನೆನ್ನುವುದನ್ನು ತೋರಿಸುತ್ತೇವೆ. ಇನ್ನು ಮುಂದೆ ಜೆಡಿಎಸ್‌ ಆಟ ಆರಂಭವಾಗಲಿದೆ” ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!