ಪ್ರಧಾನಿ ಮೋದಿಗೆ ಭಾರತೀಯರು ಮುಖ್ಯವಲ್ಲ- ರಾಜಕೀಯ ಮುಖ್ಯ: ಪ್ರಿಯಾಂಕಾ ವಾಗ್ದಾಳಿ

ನವದೆಹಲಿ: ಈ ದೇಶದ ಪ್ರಧಾನಿಗೆ ಭಾರತೀಯರು ಮುಖ್ಯವಲ್ಲ, ಕಾಜಕೀಯ ಮುಖ್ಯ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ವಾದ್ರಾ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಕೋವಿಡ್ ನಿರ್ವಹಣೆ ಬಗ್ಗೆ ಕೇಂದ್ರ ಸರ್ಕಾರವನ್ನು ಪ್ರಶ್ನಿಸುತ್ತಿರುವ ಪ್ರಿಯಾಂಕಾ ವಾದ್ರಾ, ಕೋವಿಡ್ ಸಮಯದಲ್ಲಿ ಇಡೀ ಜಗತ್ತು ಪ್ರಧಾನ ಮಂತ್ರಿಯ ಆಡಳಿತದಲ್ಲಿ ಅಸಮರ್ಥತೆಯನ್ನು ಕಂಡಿದೆ ಎಂದು ಟೀಕಿಸಿದ್ದಾರೆ. 

ಭಾರತದ ಪ್ರಧಾನಿ ಹೇಡಿಯಂತೆ ವರ್ತಿಸುತ್ತಿದ್ದಾರೆ. ಅಸಮರ್ಥತೆಯ ಮೂಲಕ ನಮ್ಮ ದೇಶದ ಜನತೆಯನ್ನು ನಿರಾಶೆಗೊಳಿಸಿದ್ದಾರೆ ಎಂದು ಪ್ರಿಯಾಂಕಾ ವಾದ್ರಾ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ. 

ಕೊರೋನಾ ಬಿಕ್ಕಟ್ಟಿನ ಸಂದರ್ಭದಲ್ಲಿನ ಸತ್ಯವನ್ನು ಪ್ರಧಾನಿ ಒಪ್ಪಿಕೊಳ್ಳಬೇಕು. ಅದನ್ನು ಬಿಟ್ಟು ಅಪಪ್ರಚಾರ ಮಾಡುತ್ತಾರೆ. ಹೀಗಾಗಿ ಜನರು ಜವಾಬ್ದಾರರು ಯಾರು ಎಂದು ಕೇಳುವ ಸಮಯ ಬಂದಿದೆ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!