ಶಿರ್ವ: ನದಿಯಲ್ಲಿ ಮುಳುಗಿ ಮೂವರು ಯುವಕರ ದುರ್ಮರಣ

ಶಿರ್ವಾ (ಉಡುಪಿ ಟೈಮ್ಸ್ ವರದಿ) ಶಿರ್ವ ಠಾಣಾ ವ್ಯಾಪ್ತಿಯ ಮೂಡುಬೆಳ್ಳೆ ಗ್ರಾಮದ ಪಾಂಬೂರು ಕಬೆಡಿ ಪರಿಸರದಲ್ಲಿರುವ ನದಿಯಲ್ಲಿ ಸ್ನಾನಕ್ಕೆಂದು ತೆರಳಿದ್ದ ಮೂವರು ಯುವಕರು ನೀರು ಪಾಲಾದ ಘಟನೆ ಇಂದು ಆದಿತ್ಯವಾರ ಸಂಜೆ ನಡೆದಿದೆ.

ಶಂಕರಪುರ ಸುಭಾಸ್ ನಗರ ಪರಿಸರದ ಮೂವರು ಯುವಕರಾದ ಮೊಹಮ್ಮದ್ ರಿಜ್ವಾನ್ (18) ಮೊಹಮ್ಮದ್ ಜಾಬೀರ್ (18) ಕೆಲ್ವಿನ್ ಕಸ್ತಲಿನೊ (19) ಪಾಂಬೂರು ಹೊಳೆಯಲ್ಲಿ ಸ್ನಾನಮಾಡಲು ಹೋದ ಮೂವರು ಯುವಕರು ನೀರುಪಾಲು.

ಮೂಡುಬೆಳ್ಳೆ ಗ್ರಾಮದ ಪಾಂಬೂರು ಕಬೇಡಿ ಎಂಬಳ್ಳಿ ನದಿಯಲ್ಲಿ ಸ್ನಾನಕ್ಕೆ ತೆರಳಿದ್ದ ಮೂವರು ಯುವಕರು ನೀರಿಪಾಲಾದ ಘಟನೆ ಭಾನುವಾರ ಸಂಜೆ ನಡೆದಿದೆ. ಕಟಪಾಡಿ ಸಮೀಪದ ಶಂಕರಪುರದ ನಿವಾಸಿ ಕೆಲ್ವಿನ್ ಕೆಸ್ತಲಿನೊ (21), ಮೂಡುಬೆಟ್ಟು ಸರಕಾರಿಗುಡ್ಡೆಯ ನಿವಾಸಿಗಳಾದ ಜಾಬೀರ್ (18) ಹಾಗೂ ರಿಜ್ವಾನ್ (28) ಈ ಮೂವರು ನೀರಲ್ಲಿ ಮುಳುಗಿ ಮೃತಪಟ್ಟವರಾಗಿದ್ದಾರೆ. ಲಾಕ್‍ಡೌನ್ ಹಿನ್ನಲೆಯಲ್ಲಿ ನದಿಯಲ್ಲಿ ಈಜಾಟವಾಡಲು ಭಾನುವಾರ ಸಂಜೆ ವೇಳೆ ಮನೆಯಿಂದ ಸುಮಾರು ಐದಾರು ಕಿ.ಮೀ ದೂರದ ಪಾಂಬೂರು ಹೊಳೆಗೆ ಈಜಾಡಲು ತೆರಳಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಶಿರ್ವ ಪೊಲೀಸರೊಂದಿಗೆ, ಅಗ್ನಿಶಾಮಕ ದಳದ ಸಿಬಂದಿಗಳು ಹಾಗೂ ಮೂಡುಬೆಳ್ಳೆ, ಪಾಂಬೂರು ಸಮೀಪದ ಸಾರ್ವಜನಿಕರು ನದಿಗಿಳಿದು ಮೂವರು ಯುವಕರ ಮೃತದೇಹದ ನದಿಯಿಂದ ಮೇಲೆಕ್ಕೆತ್ತಿದ್ದಾರೆ. ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

1 thought on “ಶಿರ್ವ: ನದಿಯಲ್ಲಿ ಮುಳುಗಿ ಮೂವರು ಯುವಕರ ದುರ್ಮರಣ

Leave a Reply

Your email address will not be published. Required fields are marked *

error: Content is protected !!