ಜೆಡಿಎಸ್‍ ಮುಖಂಡ ಕೆಮ್ತೂರು ನಾಗರಾಜ ಭಟ್ ಹೃದಯಾಘಾತದಿಂದ ನಿಧನ

ಉಡುಪಿ ಎ.22 (ಉಡುಪಿ ಟೈಮ್ಸ್ ವರದಿ): ಕೆಮ್ತೂರಿನ ದಿವಂಗತ ಗೋಪಾಲ್ ಕೃಷ್ಣ ರವರ ಮಗ ನಾಗರಾಜ ಭಟ್ ನಿಧನರಾಗಿದ್ದಾರೆ.  

ಅವರಿಗೆ 60 ವರ್ಷ ವಯಸ್ಸಾಗಿದ್ದು ಹೃದಯಾಘಾತದಿಂದ ನಿನ್ನೆ ರಾತ್ರಿ ಕೆಮ್ತೂರಿನ ಸ್ವಗೃಹದಲ್ಲಿ ಕೊನೆಯುಸಿರೆಳೆದಿದ್ದಾರೆ. ಕೃಷಿಕರಾಗಿದ್ದ ಇವರು ಜೆಡಿಎಸ್‍ನ ಮಾಜಿ ಜಿಲ್ಲಾ ಕಾರ್ಯದರ್ಶಿಯಾಗಿದ್ದರು. ಇವರು ಅವಿವಾಹಿತರಾಗಿದ್ದು, ಇಬ್ಬರು ತಂಗಿಯರನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

error: Content is protected !!