ಕುಂದಾಪುರ: ಹಳೆ ಕಾರು ಮಾರಾಟ ವ್ಯವಹಾರ, ಲಕ್ಷಾಂತರ ರೂ. ವಂಚನೆ

ಕುಂದಾಪುರ: ಪಾಲುದಾರಿಕೆ ವ್ಯವಹಾರದಲ್ಲಿ ಲಾಭಾಂಶ ನೀಡುವುದಾಗಿ ನಂಬಿಸಿ ಲಕ್ಷಾಂತರ ರೂ. ವಂಚಿಸಿರುವ ಘಟನೆ ಕುಂದಾಪುರದಲ್ಲಿ ನಡೆದಿದೆ.

ಕುಂದಾಪುರದ ತಲ್ಲೂರು ಗ್ರಾಮದ ಕೆಳ ಹಿತ್ಲುವಿನ ನಾಗೇಶ್ ರಾಮ ಚಂದನ್ ಎಂಬರಿಗೆ ಪ್ರಮೋದ ತಲ್ಲೂರು ಎಂಬವರು ತಾನು ಬೆಂಗಳೂರಿನ ನಾಗರಬಾವಿಯ ಸುಷ್ಮಾ ಎಂಬವರ ಜೊತೆಗೆ ಪಾಲುದಾರಿಕೆಯಲ್ಲಿ ಕಾರು ವ್ಯವಹಾರ ಆರಂಭಿಸಿರುವುದಾಗಿ ತಿಳಿಸಿದ್ದಾರೆ. ಅಲ್ಲದೆ ಕಾರು ಮಾರಾಟದ ವ್ಯವಹಾರಕ್ಕೆ ಸಂಬಂಧಿಸಿ ವ್ಯವಹಾರದಲ್ಲಿ ಹಣ ತೊಡಗಿಸಿದರೇ 20 ಶೇಕಡಾ ಲಾಭವನ್ನು ಪಡೆಯಬಹುದಾಗಿದೆ ಎಂದು ತಿಳಿಸಿದ್ದಾರೆ.

ಇದನ್ನು ನಂಬಿದ ನಾಗೇಶ್ ಅವರು, 2019ರ ಮಾ.13 ರಿಂದ ಒಟ್ಟು 29,12,212 ರೂ. ಹಣ ಜಮೆ ಮಾಡಿದ್ದಾರೆ. ಆದರೆ ಈವರೆಗೂ ಖಾತೆಗೆ ಹಣ ಜಮೆ ಮಾಡಿಸಿಕೊಂಡವರು ಅದರಲ್ಲಿ ವಾಪಾಸ್ಸು ನೀಡಬೇಕಾದ 21,38,712 ರೂ ಹಣವನ್ನು ಹಿಂತಿರುಗಿಸದೆ ವಂಚಿಸಿದ್ದಾಗಿದೆ ಎಂದು ನಾಗೇಶ್ ರಾಮ ಚಂದನ್ ಅವರು ದೂರು ನೀಡಿದ್ದು, ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Leave a Reply

Your email address will not be published. Required fields are marked *

error: Content is protected !!