ಸಂತೆಕಟ್ಟೆ: ಶ್ರೀಕೃಷ್ಣಾನುಗ್ರಹ ಅನಾಥಾಶ್ರಮಕ್ಕೆ ಪಲಿಮಾರು ಶ್ರೀ ಭೇಟಿ

ಉಡುಪಿ: ಸಂತೆಕಟ್ಟೆಯಲ್ಲಿ ಶ್ರೀಕೃಷ್ಣಚಾರಿಟೇಬಲ್ ಟ್ರಸ್ಟ್ ನಡೆಸುತ್ತಿರುವ ಶ್ರೀಕೃಷ್ಣಾನುಗ್ರಹ ಅನಾಥಾಶ್ರಮಕ್ಕೆ ಉಡುಪಿಯ ಪಲಿಮಾರು ಮಠಾಧೀಶರಾದ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಆಶೀರ್ವಚನ ನೀಡಿದ ಶ್ರೀಪಾದರು ಸಂಸ್ಥೆಯ ಕಾರ್ಯವೈಖರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಈ ಸಂಸ್ಥೆಗೆ ಬರುವವರೆಗೆ ಎಲ್ಲಿಯೋ ಅನಾಥರಾಗಿದ್ದ ಮಕ್ಕಳು ಈ ಸಂಸ್ಥೆಗೆ ಬಂದ ಬಳಿಕ ಅನಾಥರಲ್ಲ. ಅವರಿಗೆ ಮಮತೆಯಿಂದ ಲಾಲನೆ-ಪಾಲನೆ ದೊರೆಯುತ್ತಿದೆ. ಶ್ರೀಕೃಷ್ಣನ ಅನುಗ್ರಹ ದೊರೆತು, ಮಹಾಭಾರತದ ಕರ್ಣನಂತೆ ಈ ಮಕ್ಕಳಲ್ಲಿಯೂ ಹಲವು ಕರ್ಣರು ಮೂಡಿ ಬರಲಿ ಎಂದು ಹಾರೈಸಿದರು.

ಶ್ರೀಕೃಷ್ಣಚಾರಿಟೇಬಲ್ ಟ್ರಸ್ಟಿನ ಅಂಗಸಂಸ್ಥೆಯಾದ ಶ್ರೀಕೃಷ್ಣಾನುಗ್ರಹ ಅನಾಥಾಶ್ರಮವು ದಿ. ಶ್ರೀ ಟಿ.ವಿ.ರಾವ್ ಅವರ ಕನಸಿನ ಕೂಸು, ಪರಿತ್ಯಕ್ತ-ನಿರ್ಗತಿಕ ಮಕ್ಕಳ ಬಾಳಿನ ಆಶಾಕಿರಣವಾದ ಈ ಸಂಸ್ಥೆಯು ಕರ್ನಾಟಕ ಸರಕಾರದಿಂದ ಅರ್ಹ ಸಂಸ್ಥೆ ಹಾಗೂ ದತ್ತು ಸ್ವೀಕಾರ ಕೇಂದ್ರವಾಗಿ ಮಾನ್ಯತೆ ಪಡೆದಿದೆ. ಈ ವರೆಗೆ ಸುಮಾರು 235 ಅನಾಥ ಮಕ್ಕಳು ದಾಖಲುಗೊಂಡಿದ್ದಾರೆ, ಕಳೆದ 10ವರ್ಷಗಳಿಂದ ಸುಮಾರು 82 ಮಕ್ಕಳನ್ನು ದತ್ತು ಸ್ವೀಕಾರ ಪ್ರಕ್ರಿಯೆಯ ಮೂಲಕ ಅರ್ಹ ಫೋಷಕರ ಮಡಿಲಿಗೆ ಸೇರಿಸಿದ ಹೆಗ್ಗಳಿಕೆ ಈ ಸಂಸ್ಥೆಯದ್ದು.

Leave a Reply

Your email address will not be published. Required fields are marked *

error: Content is protected !!