ಉದ್ಯಾವರ: ನದಿಯಲ್ಲಿ ಕಪ್ಪೆಚಿಪ್ಪು ಹೆಕ್ಕಲು ಹೋದ ಯುವಕ ಕಣ್ಮರೆ
ಉಡುಪಿ (ಉಡುಪಿ ಟೈಮ್ಸ್ ವರದಿ): ಪಿತ್ರೋಡಿ ಕಡವಿನ ಬಾಗಿಲು ಬಳಿ ನದಿಯಲ್ಲಿ ಮರುವಾಯಿ (ಕಪ್ಪೆಚಿಪ್ಪು) ಹೆಕ್ಕಲು ಹೋದ ಯುವಕನೋರ್ವ ಕಣ್ಮರೆಯಾದ ಈ ಘಟನೆ ನಡೆದಿದ್ದು ನದಿಯಲ್ಲಿ ಸ್ಥಳೀಯರು ಹುಡುಕಾಟ ಮಾಡುತ್ತಿದ್ದಾರೆ.
22 ವರ್ಷದ ಯುವಕ ತನ್ನಿಬ್ಬರು ಸ್ನೇಹಿತರ ಜೊತೆ ಉದ್ಯಾವರ ಪಿತ್ರೋಡಿಯಲ್ಲಿ ಕಪ್ಪೆಚಿಪ್ಪು ಹೆಕ್ಕಲು ನದಿಗೆ ಇಳಿದ ಸಂದರ್ಭ ನೀರಿನ ಸೆಳೆತಕ್ಕೆ ಕೊಚ್ಚಿ ಹೋಗಿದ್ದಾರೆಂದು ತಿಳಿದು ಬಂದಿದೆ. ಯುವಕ ಬಂಟಕಲ್ಲು ನಿವಾಸಿ ಎಂದು ತಿಳಿದು ಬಂದಿದ್ದು ಇನ್ನಷ್ಟೇ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಾಗಿದೆ.
So sad