ಕಡೆಕಾರು: ನಾಮ ಫಲಕ ತೆರವಿಗೆ ಜಿ.ಪಂ. ಅಧ್ಯಕ್ಷರು ಸೂಚಿಸಿಲ್ಲ-ಪಿಡಿಓ ಸ್ಪಷ್ಟನೆ
ಕಡೆಕಾರು: (ಉಡುಪಿ ಟೈಮ್ಸ್ ವರದಿ)ಮಾಜಿ ಸಚಿವ ಪ್ರಮೋದ್ ಅವರ ಅಭಿವೃದ್ಧಿ ಕಾರ್ಯಗಳ ನಾಮ ಫಲಕವನ್ನು ಕಿಡಿಗೇಡಿಗಳು ತೆರವುಗೊಳಿಸಿರುವ ವಿಚಾರಕ್ಕೆ ಸಂಬಂಧಿಸಿ ಕಡೆಕಾರ್ ಪಂಚಾಯತ್ ಪಿಡಿಓ ಸ್ಪಷ್ಟೀಕರಣ ನೀಡಿದ್ದಾರೆ.
ಈ ವಿಚಾರಕ್ಕೆ ಜಿಲ್ಲಾ ಪಂಚಾಯತ್ ಅಧ್ಯಕ್ಷರು ಕಡೆಕಾರ್ ಗ್ರಾಮ ಪಂಚಾಯತ್ ಪಿಡಿಓ ಗೆ ಕರೆ ಮಾಡಿ ನಾಮ ಫಲಕ ತೆರವು ಗೊಳಿಸುವಂತೆ ಸೂಚಿಸಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿ ಸ್ಪಷ್ಟಣೆ ನೀಡಿರುವ ಕಡೆಕಾರ್ ಪಿಡಿಓ ಸಿದ್ದೇಶ್ ಅವರು, ನಾಮ ಫಲಕಕ್ಕೆ ಸಂಬಂಧಿಸಿದ ವಿಚಾರ ಇದೊಂದು ಸ್ಥಳೀಯವಾಗಿ ನಡೆದಿರುವ ವಿಚಾರವಾಗಿದೆ. ಇದನ್ನು ನಾವು ಗ್ರಾಮ ಪಂಚಾಯತ್ ಹಂತದಲ್ಲಿಯೇ ಈ ಸಮಸ್ಯೆಯನ್ನು ಬಗೆ ಹರಿಸಿಕೊಳ್ಳುತ್ತೇವೆ.
ಅಲ್ಲದೆ ಈ ನಾಮ ಫಲಕ ವಿಚಾರಕ್ಕೆ ಸಂಬಂದಿಸಿ ಜಿಲ್ಲಾ ಪಂಚಾಯತ್ ಅಧ್ಯಕ್ಷರು ಕರೆ ಮಾಡಿರುವುದಿಲ್ಲ. ಹಾಗೂ ಈ ವಿಚಾರಕ್ಕೆ ಸಂಬಂಧಿಸಿ ಯಾವುದೇ ರೀತಿಯ ನಿರ್ದೇಶನವನ್ನೂ ನೀಡಿರುವುದಿಲ್ಲ. ಈ ಬಗ್ಗೆ ಮಾ.15 ರಂದು ಸಭೆ ನಡೆಸಿ ಸ್ಥಳೀಯರು, ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಪಿಡಿಓ ಹಾಗೂ ಸ್ಥಳೀಯ ಸದಸ್ಯರೊಂದಿಗೆ ಮಾತುಕತೆ ನಡೆಸಿ ಈ ಸಮಸ್ಯೆಯನ್ನು ಗ್ರಾಮ ಪಂಚಾಯತ್ ಹಂತದಲ್ಲೇ ಇತ್ಯರ್ಥ ಮಾಡಿಕೊಳ್ಳುತ್ತೇವೆ ಎಂದು ಸ್ಪಷ್ಟಪಡಿಸಿದರು.