ಬ್ರಹ್ಮಾವರ: ಪ್ರಸಿದ್ದ ಜವಳಿ ಮಳಿಗೆ ‘ಸತ್ಯನಾಥ ಸ್ಟೋರ್ಸ್’ ನೂತನ ಶಾಖೆ ಶುಭಾರಂಭ

ಬ್ರಹ್ಮಾವರ: ಮಾರಿಗುಡಿ ರಸ್ತೆಯ ಹಳೆ ಪೊಲೀಸ್ ಸ್ಟೇಶನ್ ಮುಂಭಾಗ ಪುರುಷೋತ್ತಮ ಮಂದಿರದ ನೂತನ ಕಟ್ಟಡದಲ್ಲಿ ಶುಭಾರಂಭಗೊಂಡಿರುವ ಸತ್ಯನಾಥ ಸ್ಟೋರ್ಸ್ ನ್ನು ಸಾಬರಕಟ್ಟೆ ಗರಿಕೆಮಠ ಶ್ರೀಅರ್ಕ ಮಹಾಗಣಪತಿ ದೇವಸ್ಥಾನದ ವೇದಮೂರ್ತಿ ಜಿ. ರಾಮಪ್ರಸಾದ ಅಡಿಗ ಉದ್ಘಾಟಿಸಿದರು. 

ಬಳಿಕ ಮಾತನಾಡಿ ಈ ಸಂಸ್ಥೆ  ‌‌ಮತ್ತಷ್ಟು ಎತ್ತರಕ್ಕೆ ಬೆಳೆಯಲಿ ಶುಭ ಹಾರೈಸಿದ ಅವರು ಒಂದು ನಿಮಿಷದಲ್ಲಿ ಯಾವುದೇ ಒಂದು ಗಿಡ ಮರ ಆಗಲು ಸಾಧ್ಯವಿಲ್ಲ. ಅದಕ್ಕೆ ಸಾಕಷ್ಟು ಸಮಯ ಬೇಕಾಗುತ್ತದೆ. ಅದರಂತೆ  ಸತ್ಯನಾಥ ಸ್ಟೋರ್ಸ್ ಎಂಬ ಸಂಸ್ಥೆ ನ್ನು ಹಿರಿಯರ ಕನಸಿನಂತೆ  ಸಣ್ಣದಾಗಿ ಆರಂಭಿಸಿದ್ದು, ಈ ಸಂಸ್ಥೆ ಇಂದು ಹೆಮ್ಮಾರವಾಗಿ ಬೆಳೆದು ನಿಂತಿದೆ.

ಸಣ್ಣ ಪ್ರಮಾಣದ ಲಾಭಾಂಶ ಸಿಕ್ಕರೂ ಸಾಕು. ಆದರೆ ವ್ಯಾಪಾರ, ವ್ಯವಹಾರದಲ್ಲಿ ಯಾವುದೇ ಮೋಸಕ್ಕೆ ಅವಕಾಶ ನೀಡಬಾರದು ಎಂಬುವುದು ಸತ್ಯನಾಥರ ವ್ಯವಹಾರಿಕ ಧರ್ಮ. ಸತ್ಯನಾಥ ಅವರು, ತಮ್ಮ ಸಂಸ್ಥೆಯಲ್ಲಿ ದುಡಿಯುವ ಕೆಲಸಗಾರರನ್ನು  ಸ್ವತಃ ತಮ್ಮ ಮನೆಯ ಸದಸ್ಯರಂತೆ ನೋಡಿಕೊಳ್ಳುತ್ತಾರೆ.  ಸತ್ಯನಾಥ ಸ್ಟೋರ್ಸ್ ಎನ್ನುವುದು ಕೇವಲ ಸಂಸ್ಥೆಯಲ್ಲ, ಅದೊಂದು ಆಲೋಚನೆ. ನಾಲ್ಕು ಜನರಿಗೆ ಒಳ್ಳೆಯದನ್ನು ಮಾಡಬೇಕೆಂಬುದು ಸತ್ಯನಾಥ ಪುರುಷೋತ್ತಮ ಪೈ ಅವರ ಆಲೋಚನೆಯಾಗಿದೆ. ಅದರಂತೆ ತಮ್ಮ ಸಂಸ್ಥೆ ಯ ಮೂಲಕ ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತಾ ಬಂದಿದ್ದು ಗ್ರಾಹಕರಿಂದ ಮೆಚ್ಚುಗೆಗೆ ಪಾತ್ರವಾಗಿದೆ ಎಂದರು.

ಇದೇ ವೇಳೆ ಸತ್ಯನಾಥ ಸ್ಟೋರ್ಸ್ ಸಂಸ್ಥೆಯ ಮಾಲೀಕ ಸತ್ಯನಾಥ ಪುರುಷೋತ್ತಮ ಪೈ ಮಾತನಾಡಿ, ದೇವರ ಅನುಗ್ರಹ ಜತೆಗೆ ಕರಾವಳಿ ಹಾಗೂ ಮಲೆನಾಡಿನ ಜನತೆ ಸಂಸ್ಥೆಯ ಮೇಲೆ ಇಟ್ಟಿರುವ ಪ್ರೀತಿ, ವಿಶ್ವಾಸದಿಂದ ಏಳು ದಶಕಗಳಿಂದ ಸಂಸ್ಥೆಯನ್ನು ಮುನ್ನಡೆಸಿಕೊಂಡು ಬರಲು ಸಾಧ್ಯವಾಗಿದೆ. ಜನರ ಈ ಪ್ರೀತಿ, ವಿಶ್ವಾಸ ಸಂಸ್ಥೆಯ ಮೇಲೆ ಸದಾ ಇರಲಿ ಎಂದು ಆಶಿಸಿದರು.

ಈ ಸಂದರ್ಭದಲ್ಲಿ ಸುಪ್ರಭ ಸತ್ಯನಾಥ ಪೈ, ಗಿರಿಧರ ಸತ್ಯನಾಥ ಪೈ, ಗೌತಮಿ ಗಿರಿಧರ ಪೈ, ಧಾತ್ರಿ ಪೈ, ರೋಹಿತ್ ನಾಯಕ್, ಶ್ರೀದೇವಿ ರೋಹಿತ್ ನಾಯಕ್, ಅಮೂಲ್ಯ ನಾಯಕ್, ಕುಂಬ್ಳೆವೆಂಕಟೇಶ್ ಭಟ್, ವಿದ್ಯಾ ವಿ.ಭಟ್, ಬಾಲಕೃಷ್ಣ ನಾಯಕ್, ರಾಧಿಕಾ
ನಾಯಕ್, ಬಂಧುಗಳು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

1949ರಲ್ಲಿ ಆರಂಭಗೊಂಡ ಈ ಸಂಸ್ಥೆಯು ಏಳು ದಶಕಗಳ ಕಾಲ ಜವುಳಿ ಕ್ಷೇತ್ರದಲ್ಲಿ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಸೇವೆ ಮೂಲಕ ಗ್ರಾಹಕರ ಮನೆಮಾತಾಗಿದೆ.
ಈಗಾಗಲೇ ಕರಾವಳಿ, ಮಲೆನಾಡಿನಾದ್ಯಂತ ಭಾರೀ  ಮೆಚ್ಚುಗೆಗೆ ಪಾತ್ರವಾಗಿರುವ ಸಂಸ್ಥೆಯು ನೂತನ ಶಾಖೆಯು 30,000 ಚದರ ಅಡಿಯ ವಿಸ್ತೀರ್ಣದಲ್ಲಿ ನಾಲ್ಕು ಅಂತಸ್ತಿನಲ್ಲಿ ಹವಾನಿಯಂತ್ರಿತ ಮಳಿಗೆಯನ್ನು ಹೊಂದಿದೆ.

ಇಲ್ಲಿ ಗ್ರಾಹಕರಿಗೆ ಟೆಕ್ಸ್ ಟೈಲ್ಸ್, ಹ್ಯಾಂಡ್ ಲೂಮ್ಸ್, ರೆಡಿಮೇಡ್ಸ್ ವಸ್ತ್ರಗಳು. ಇಪ್ಪತ್ತಕ್ಕೂ ಅಧಿಕ ರಾಜ್ಯಗಳಿಂದ ಸಂಗ್ರಹಿಸಲ್ಪಟ್ಟ ವೈವಿಧ್ಯಮಯ ಜವಳಿ ಸಂಗ್ರಹ, ಪರಿಪೂರ್ಣ ಮದುವೆ ಜವಳಿ ಮಳಿಗೆ, ಪರಿಣಿತ ಗ್ರಾಹಕ ಸೇವಕರ ತಂಡ, ದೇಶದ ಪ್ರತಿಷ್ಠಿತ ಕಂಪೆನಿಗಳ ವಸ್ತ್ರಗಳು, ಸಾಂಪ್ರದಾಯಿಕ ಮತ್ತು ಆಧುನಿಕ ಶೈಲಿಯ ಎಲ್ಲಾ ವಯಸ್ಸಿನವರಿಗೆ ಬೇಕಾದ ನವ  ನವೀನ ಬಟ್ಟೆಗಳು ಸಿಗಲಿದೆ.  ಮದುವೆ ಜವುಳಿ ಸಹಿತ ಕಾಂಜೀವರಂ, ಬನಾರಸ್, ಧರ್ಮಾ ವರಂ, ಕಾಟನ್ ಸಾರಿ, ಕಾಟನ್ ಸಿಲ್ಕ್ ಕೋಲ್ಕತಾ ಕಾಟನ್, ಬಾಂಗ್ಲಾ ಕಾಟನ್, ಫ್ಯಾನ್ಸಿ ಡಿಸೈನರ್ ಸಾರೀಸ್, ಬೈಡಲ್ ಲೆಹಂಗಾ, ಲಾಂಗ್ ಟಾಪ್, ಚೂಡಿದಾರ್, ಕುರ್ತೀಸ್, ಮಕ್ಕಳ ಉಡುಪುಗಳು, ಮೆನ್ಸ್‍ವೇರ್, ಹ್ಯಾಂಡ್ ಲೂಮ್ಸ್ ಬ್ಯಾಂಡೆಡ್ ಡಿಸೈನ್ ಸಾರಿ ಸಹಿತ ನಾನಾ ಕಂಪೆನಿಗಳ ವಿವಿಧ ವಿನ್ಯಾಸದ ಉಡುಪುಗಳ ಅಪೂರ್ವ ಸಂಗ್ರಹದ ಪರಿಪೂರ್ಣ ಮಳಿಗೆ ಇದಾಗಿದೆ.

ಇಲ್ಲಿ ಗ್ರಾಹಕರಿಗೆ ಬೇಕಾದ ವಿನ್ಯಾಸದ ಉಡುಗೆಗಳು ಒಂದೇ ಸೂರಿನಡಿಯಲ್ಲಿ ಸಿಗುತ್ತಿದ್ದು. ಆಕರ್ಷಕ ಬೆಲೆಯಲ್ಲಿ ನಿಮ್ಮಿಷ್ಟದ  ಉಡುಗೆಗಳನ್ನು ನಿಮ್ಮದಾಗಿಸಿಕೊಳ್ಳುವ ಅವಕಾಶ ಸಿಗುತ್ತಿದೆ. ಇದರೊಂದಿಗೆ ಇಲ್ಲಿ ಬರುವ ಗ್ರಾಹಕರ ಅನುಕೂಲಕ್ಕಾಗಿ ವ್ಯವಸ್ಥಿತವಾದ 300 ಕ್ಕೂ ಹೆಚ್ಚು ವಾಹನ ನಿಲುಗಡೆ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಅಲ್ಲದೆ ಗ್ರಾಹಕರಿಗೆ ಉಚಿತ ವೈಫೈ ಸೌಲಭ್ಯ ಹಾಗೂ ಗ್ರಾಹಕರ ಅನುಕೂಲಕ್ಕಾಗಿ ಫುಡ್‌ಕೋರ್ಟ್ ವ್ಯವಸ್ಥೆ ಯೂ ಇದೆ.

 ಒಟ್ಟಿನಲ್ಲಿ ಇನ್ನು ಮುಂದೆ ಬ್ರಹ್ಮಾವರದ ಜನತೆ ತಮ್ಮ ಶುಭಾ ಸಮಾರಂಭಗಳಿಗೆ ಬೇಕಾದ ಎಲ್ಲಾ ಬಗೆಯ ಸಾಂಪ್ರದಾಯಿಕ ಹಾಗೂ ಆಧುನಿಕ ಶೈಲಿಯ ಬಟ್ಟೆಗಳನ್ನು ಸತ್ಯನಾಥ ಸ್ಟೋರ್ ನಲ್ಲಿ ಒಂದೇ ಸೂರಿನಡಿಯಲ್ಲಿ ಪಡೆಯಬಹುದಾಗಿದೆ.

Leave a Reply

Your email address will not be published. Required fields are marked *

error: Content is protected !!