ನೋಡಿದವರ ಬಣ ಹಾಗೂ ಮಾಡಿದವರ ಬಣ ಎನ್ನುವ ಬಿಜೆಪಿ ಕಿತ್ತಾಟದಲ್ಲಿ ಒಂದು ವಿಕೆಟ್ ಪತನ: ಕಾಂಗ್ರೆಸ್ ವ್ಯಂಗ್ಯ

ಬೆಂಗಳೂರು: ನೋಡಿದವರ ಹಾಗೂ ಮಾಡಿದವರ ಬಣದ ಕಿತ್ತಾಟದಲ್ಲಿ ಒಂದು ವಿಕೆಟ್ ಬಿತ್ತು ಎಂದು ರಮೇಶ್ ಜಾರಕಿ ಹೊಳಿ ರಾಜಿನಾಮೆ ಕುರಿತಾಗಿ ರಾಜ್ಯ ಕಾಂಗ್ರೆಸ್ ವ್ಯಂಗ್ಯವಾಡಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್  “ನೋಡಿದವರ ಬಣ” ಹಾಗೂ “ಮಾಡಿದವರ ಬಣ” ಎನ್ನುವ ಬಿಜೆಪಿಯ ಅಂತರಿಕ ಕಿತ್ತಾಟದಲ್ಲಿ ಒಂದು ವಿಕೆಟ್ ಬಿದ್ದಿದೆ.  ನಿಮ್ಮ ಸಚಿವರು ಹಾಸಿಗೆಯಲ್ಲೂ “ಯಡಿಯೂರಪ್ಪ ಭ್ರಷ್ಟ” ಎಂದು ಕನವರಿಸುತ್ತಿದ್ದಾರೆ ಎಂದರೆ ವಿಜಯೇಂದ್ರ ಸರ್ವಿಸ್ ಟ್ಯಾಕ್ಸ್ ಲೂಟಿ ಎಷ್ಟರ ಮಟ್ಟಿಗಿರಬಹುದು! ನಿಮ್ಮವರೇ ನಿಮಗೆ ಬ್ಯಾಕ್ ಮೇಲ್ ಜನತಾ ಪಾರ್ಟ್ ಎಂದಿದ್ದು ಇದಕ್ಕೇನಾ? ಎಂದು ರಾಜ್ಯ ಕಾಂಗ್ರೆಸ್ ಟ್ವೀಟ್ ಮೂಲಕ ವ್ಯಂಗ್ಯವಾಡಿದೆ.

ಧರ್ಮ, ಸಂಸ್ಕøತಿ ರಕ್ಷಣೆಯಲ್ಲಿ ಅತ್ಯುತ್ತಮ ಪರ್ಫಾರ್ಮೆನ್ಸ್ ರಾಜ್ಯ ಬಿಜೆಪಿ ನಾಯಕರು ತೋರಿದ್ದಾರೆ. ಕಳೆದ ಬಾರಿಯಲ್ಲಿ ರೇಣುಕಾಚಾರ್ಯ, ಹಾಲಪ್ಪ, ರಘುಪತಿ ಭಟ್, ಸವದಿ, ಸಿಸಿ ಪಾಟೀಲ್, ರಾಮ ದಾಸ್, ಕೃಷ್ಣ ಪಾಲೆಮಾರ್, ಇನ್ನು ಈ ಬಾರಿಯಲ್ಲಿ ಅರವಿಂದ ಲಿಂಬಾವಳಿ, ರಮೇಶ್ ಜಾರಕಿಹೊಳಿ ಲಿಸ್ಟ್ ಮುಂದುವರೆಯುವುದು ಅಲ್ಲವೇ. ಮಾನ, ಮರ್ಯಾದೆ, ಲಜ್ಜೆ ಮೂರೂ ಬಿಟ್ಟಿರುವ ಬಿಜೆಪಿಗೆ ಮುಜುಗರವೇ ? ಮುಜುಗರವೆಂದರೆ ಏನೆಂದು ಅರಿಯದ ಬಿಜೆಪಿ ಪಕ್ಷಕ್ಕೆ ಮುಜುಗರವಾಗುತ್ತದೆಯೇ ? ಎಂದು ಮತ್ತೊಂದು ಟ್ವೀಟ್ ಮಾಡಿ ರಾಜ್ಯ ಸರ್ಕಾರದ ಕುರಿತು ಲೇವಡಿ ಮಾಡಿದೆ. 

Leave a Reply

Your email address will not be published. Required fields are marked *

error: Content is protected !!