ಕಾಪು: ಮೀನುಗಾರಿಕೆಗೆ ಹೋದ ವ್ಯಕ್ತಿ ನೀರಿನಲ್ಲಿ ಮುಳುಗಿ ಮೃತ್ಯು

ಕಾಪು: ಆಕಸ್ಮಿಕವಾಗಿ ನೀರಿಗೆ ಬಿದ್ದು, ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಕಾಪುವಿನಲ್ಲಿ ನಡೆದಿದೆ. ಮನೋಜ್ (45) ಮೃತಪಟ್ಟವರು. ಇವರು, ಫೆ.20 ರಂದು ಮೀನುಗಾರಿಕೆ ನಡೆಸಲು ಟ್ಯೂಬ್‍ನಲ್ಲಿ ಬಲೆ ಕಟ್ಟಿಕೊಂಡು ಕಾಪು ಲೈಟ್ ಹೌಸ್‍ನ ಬಳಿ ಹೋಗಿದ್ದರು. ಆದರೆ ಬಳಿಕ ಮರಳಿ ಬಂದಿರುವುದಿಲ್ಲ.

ಫೆ.21 ರಂದು ಪೊಲಿಪು ಪಡು ಲಕ್ಷ್ಮೀ ನಾರಾಯಣ ಭಜನಾ ಮಂದಿರದ ಬಳಿ ಸಮುದ್ರ ತೀರದಲ್ಲಿ ಮನೋಜ್‍ರವರ ಮೃತದೇಹ ಪತ್ತೆಯಾಗಿದ್ದು, ಮನೋಜ್ ಅವರು ಮೀನುಗಾರಿಕೆ ನಡೆಸುತ್ತಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ಸಮುದ್ರದ ನೀರಿನಲ್ಲಿ ಮುಳುಗಿ  ಮೃತಪಟ್ಟಿರುವುದಾಗಿ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!