ಕೃಷಿ ಕಾಯ್ದೆಯಿಂದ ತೊಂದರೆ ಇದ್ದರೆ ಬದಲಾವಣೆಗೆ ಸಿದ್ಧ- ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: ನೂತನ ಕೃಷಿ ಕಾಯ್ದೆಗಳಿಂದ ತೊಂದರೆ ಇದ್ದರೆ ಬದಲಾಯಿಸಲು ಸಿದ್ಧ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಇಂದು ಲೋಕಸಭೆಯಲ್ಲಿ ನೂತನ ಕಾಯ್ದೆಗಳ ಬಗ್ಗೆ ಮಾತನಾಡಿದ ಅವರು, ಕೊರೊನಾ ಕಾಲದಲ್ಲಿ 3 ಕೃಷಿ ಕಾಯ್ದೆಗಳನ್ನ ಜಾರಿ ಮಾಡಿದ್ದು, ಈ ಕೃಷಿ ಕಾಯ್ದೆಗಳು ಬಹಳ ಅವಶ್ಯಕ ಮತ್ತು ಅಗತ್ಯವಾಗಿವೆ.

ಕೃಷಿ ಕ್ಷೇತ್ರದ ಅಭಿವೃದ್ಧಿಗಾಗಿ ಈ ಕಾಯ್ದೆಗಳನ್ನ ಜಾರಿಗೆ ತರಲಾಗಿದೆ. ಆದರೆ ಕೃಷಿ ಕಾಯ್ದೆಗಳ ವಿರುದ್ಧ ವದಂತಿಗಳ ಹಬ್ಬಿಸಲಾಗುತ್ತಿದೆ. ಬೆಂಬಲ ಬೆಲೆಯನ್ನ ಹಿಂದಿಗಿಂತಲೂ ಹೆಚ್ಚಾಸಲಾಗಿದ್ದು, ಒಂದು ವೇಳೆ ಕೃಷಿ ಕಾಯ್ದೆಗಳಿಂದ ತೊಂದರೆ ಇದ್ದರೇ ಅದನ್ನು ಬದಲಾಯಿಸಲು ಸಿದ್ಧ ಎಂದು ಹೇಳಿದರು. 

ಇನ್ನು ರೈತರ ಬದುಕು ಬದಲಾಯಿಸುವ ದೃಷ್ಟಿಯಲ್ಲಿ ನಾವು ಕೃಷಿ ಕಾಯ್ದೆಗಳ ಜಾರಿ ತಂದಿದ್ದೇವೆ. ಆದರೆ ರೈತರು ಬೇರೆಯವರ ಶಿಕಾರಿಗಳಾಗಿದ್ದಾರೆ. ಸರ್ಕಾರದ ಹಿರಿಯ ಮಂತ್ರಿಗಳು ರೈತರ ಜೊತೆ ನಿರಂತರವಾಗಿ ಚರ್ಚೆ ಮಾಡುತ್ತಿದ್ದಾರೆ. ಧರಣಿ ನಿರತ ರೈತರ ಜೊತೆ ನಾವು ಚರ್ಚೆ ಮಾಡುತ್ತಿದ್ದೇವೆ. ಧರಣಿ ನಿರತ ರೈತರನ್ನ ನಾವು ಗೌರವಿಸುತ್ತೇವೆ. ಆದರೆ ಈ ಕಾಯ್ದೆಗಳಿಂದ ತೊಂದರೆ ಆಗುತ್ತದೆ ಎಂದು ಚರ್ಚೆ ಮಾಡುವವರು ಈ ಕಾಯ್ದೆಗಳ ಉದ್ದೇಶದ ಬಗ್ಗೆ ಚರ್ಚೆ ಮಾಡಿದ್ದರೇ ಚೆನ್ನಾಗಿರುತ್ತಿತ್ತು ಎಂದರು.

Leave a Reply

Your email address will not be published. Required fields are marked *

error: Content is protected !!