ಬೈರಂಪಳ್ಳಿ: ‘ಶ್ರಮಿಕ’ ತರುಣರ ತಂಡ ಉದ್ಘಾಟನೆ

ಉಡುಪಿ: ಬೈರಂಪಳ್ಳಿ “ಶ್ರಮಿಕ” ತರುಣರ ತಂಡದ ಉದ್ಘಾಟನಾ ಸಮಾರಂಭ ಇತ್ತೀಚೆಗೆ ಸರಕಾರಿ ಕಿರಿಯ ಶಾಲೆಯ ನ್ಯೂ ಕಲ್ಲಾಳ  ಬೈರಂಪಳ್ಳಿಯಲ್ಲಿ ನಡೆಯಿತು. ಮಹಾಲಸ ನಾರಾಯಣಿ ದೇವಸ್ಥಾನದ ಧರ್ಮದರ್ಶಿ ಸುರೇಶ್ ಪೈ  ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಶ್ರಮಿಕ ತರುಣರ ತಂಡದ ಅಧ್ಯಕ್ಷರು, ಗ್ರಾ.ಪಂ ಸದಸ್ಯರು ಆದ ಸಂತೋಷ ಕುಮಾರ್ ಬೈರಂಪಳ್ಳಿ ಯವರು ಪ್ರಾಸ್ತಾವಿಕ ನುಡಿದರು.

ಕಾರ್ಯಕ್ರಮದಲ್ಲಿ ಸಮಾಜ ಸೇವಕ ವಿಶು ಶೆಟ್ಟಿ ಅಂಬಲಪಾಡಿ, ಸಾಮಾಜಿಕ ಚಿಂತಕರು ಶ್ರೀಮತಿ ಭಾರತಿ ಹೆಗ್ಡೆ, ರಾಜು ಶೆಟ್ಟಿ, ಎಸ್ ಡಿ ಎಂಸಿ ಅಧ್ಯಕ್ಷೆ ಶಶಿಕಲಾ ಪೂಜಾರಿ ಶಾಲಾ ಮುಖ್ಯೋಪಾಧ್ಯಾಯರಾದ ಉಮೇಶ್ ನಾಯಕ್, ಗ್ರಾ.ಪಂ ಸದಸ್ಯ ವಿಜಯ ಕುಮಾರ್ , ಬೈರಂಪಳ್ಳಿಯ ಗ್ರಾ.ಪಂ ಮಾಜಿ ಸದಸ್ಯೆ ವಿಜಯಶ್ರೀ ಭಟ್ ಉಪಸ್ಥಿತರಿದ್ದರು. ಆನಂದ ಪೂಜಾರಿ ಸ್ವಾಗತಿಸಿ ,ಸ್ವಾತಿ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ಈ  ಸಂದರ್ಭದಲ್ಲಿ ಅತಿಥಿಗಳನ್ನು ಮೆರವಣಿಗೆಯಲ್ಲಿ ಸ್ವಾಗತಿಸಲಾಯಿತು.

Leave a Reply

Your email address will not be published. Required fields are marked *

error: Content is protected !!