ಕಾರ್ಕಳ: ಪಂಚಾಯತ್ ಚುನಾವಣೆಯಲ್ಲಿ ಗೆದ್ದಾತ ನಿಗೂಢ ನಾಪತ್ತೆ!

ಕಾರ್ಕಳ: ಪಂಚಾಯತ್ ಚುನಾವಣೆಯಲ್ಲಿ ಗೆದ್ದ ವ್ಯಕ್ತಿಯೋರ್ವರು ಯಾರ ಸಂಪರ್ಕಕ್ಕೂ ಸಿಗದೇ ನಾಪತ್ತೆಯಾಗಿರುವ ಘಟನೆ ಕಾರ್ಕಳದಲ್ಲಿ ನಡೆದಿದೆ.

ಕಾರ್ಕಳದ ಮೀಯಾರು ಗ್ರಾಮ ‌ಸಮಿತಿಯ ಅಧ್ಯಕ್ಷ ತಾರನಾಥ್ ಕೊಟ್ಯಾನ್ ಅವರು ಈ ಬಗ್ಗೆ ದೂರಿದ್ದು, ಮಿಯಾರು ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲದೊಂದಿ ಮೀಸಲಾತಿಯಲ್ಲಿ ಗೆದ್ದ ವ್ಯಕ್ತಿ ನಾಪತ್ತೆಯಾಗಿದ್ದಾರೆ. ಅಲ್ಲದೆ  ಈ ನಾಪತ್ತೆ ಹೈಡ್ರಾಮಾದಲ್ಲಿ ಸ್ಥಳೀಯ ಮುಖಂಡರೊಬರ ಕೈವಾಡ ಇರುವ ಬಗ್ಗೆ ಸಂಶಯ ವ್ಯಕ್ತ ಪಡಿಸಿದ್ದಾರೆ. 

ಮನೆಯವರ ಬಳಿ ವಿಚಾರಿಸಿದಾಗ ಅವರು ಭಯಪಟ್ಟಂತೆ ಕಾಣುತ್ತಿದ್ದು, ಸರಿಯಾದ ಉತ್ತರ ನೀಡಲು ಹೆದರುತ್ತಿದ್ದಾರೆ. ಆದ್ದರಿಂದ ನಾಪತ್ತೆಯಾಗಿರುವವರು ಇಂದೂ ಕೂಡಾ ಬಾರದಿದ್ದರೆ ಪೋಲೀಸ್ ಠಾಣೆಗೂ ದೂರು‌ ನೀಡಲು ಸಿದ್ದತೆ ಮಾಡಿಕೊಳ್ಳಲಾಗಿದೆ. ನಮಗೆ ಬಹುಮತವಿಲ್ಲದಿದ್ದರೂ ನಮ್ಮ ಸದಸ್ಯರನ್ನು ಬಲವಂತವಾಗಿ ಕರೆದು‌ಕೊಂಡು ಹೋಗಲಾಗಿದೆ ಎಂಬ ಬಲವಾದ ಸಂಶಯವಿದೆ ಆದರೆ ಯಾವ ಉದೇಶಕ್ಕಾಗಿ ಈ ಪ್ರಕರಣ ನಡೆದಿದೋ ಅದು ನೆರವೇರಲು ಬಿಡುದಿಲ್ಲ ಎಂದು  ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!