ಧರ್ಮ ಪ್ರಚಾರದ ಹೆಸರಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳ- ಪಾದ್ರಿ ಬಂಧನ

ಬಳ್ಳಾರಿ: ಮಹಿಳೆಯರಿಗೆ ವಂಚಿಸಿದ್ದ ಚರ್ಚ್ ಪಾದ್ರಿ ರವಿಕುಮಾರ್ ಕೊನೆಗೂ ಜೈಲು ಪಾಲಾಗಿದ್ದಾನೆ. ಧರ್ಮ ಪ್ರಚಾರದ ಹೆಸರಲ್ಲಿ ಮಹಿಳೆಯರಿಗೆ ವಂಚನೆ ಹಾಗೂ ಲೈಂಗಿಕ ದೌರ್ಜನ್ಯ ಮಾಡಿದ ಹಿನ್ನೆಲೆಯಲ್ಲಿ ರವಿಕುಮಾರ್ ನನ್ನು ಬಳ್ಳಾರಿ ಪೊಲೀಸರು ಬಂಧಿಸಿದ್ದಾರೆ.

ನಗರದ ಲಿವಿಂಗ್ ವಾಟರ್ ಚರ್ಚ್‍ನ ಪಾದ್ರಿಯಾಗಿದ್ದ ರವಿ ಕುಮಾರ್, ಮಹಿಳೆಯರನ್ನು ಮರಳು ಮಾಡಿ ಹಣ ಪಡೆದು ವಂಚಿಸಿದ್ದಾನೆ. ಅಲ್ಲದೆ ಅತ್ಯಾಚಾರವನ್ನೂ ಎಸಗಿದ್ದಾನೆ. ಈ ಕುರಿತು ಇದೀಗ ಇಬ್ಬರು ಮಹಿಳೆಯರು ದೂರು ನೀಡಿದ್ದು, ದೂರಿನ ಆಧಾರದ ಮೇರೆಗೆ ಆರೋಪಿಯನ್ನು ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.

ಕಳೆದ ಒಂದು ವಾರದ ಹಿಂದೆ ಬಳ್ಳಾರಿಯ ಯುವತಿ ಶ್ವೇತಾಳನ್ನು ಅಪಹರಿಸಿದ್ದಾನೆ ಎಂದು ಡಿಸೆಂಬರ್ 24ರಂದು ಪಾಲಕರು ಬಳ್ಳಾರಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಬಳಿಕ ಶ್ವೇತಾ ಸ್ವತಃ ನಾನೇ ರವಿ ಜೊತೆಯಲ್ಲಿ ಬಂದಿರುವೆ, ನಾನು ಅವಳ ಜೊತೆ ಮದುವೆ ಆಗಿರುವುದಾಗಿ ರವಿ ಹೇಳಿರುವ ವಿಡಿಯೋವನ್ನು ಶ್ವೇತಾ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದಳು.

ಬಳಿಕ ಪಾದ್ರಿ ರವಿ ವಿರುದ್ಧ ಮತ್ತಿಬ್ಬರು ಯುವತಿಯರು ದೂರು ನೀಡಿದ್ದು, ಧರ್ಮದ ಹೆಸರಲ್ಲಿ ಸುಮಾರು 9 ಲಕ್ಷ ರೂ. ಹಣ ದೋಚಿರುವ ಬಗ್ಗೆ ಒಬ್ಬರು, ಇನ್ನೊಬ್ಬ ಯುವತಿ ಅತ್ಯಾಚಾರ ಮಾಡಿದ್ದಾನೆ ಎಂದು ದೂರು ದಾಖಸಿದ್ದಾರೆ. ಇಬ್ಬರು ಮಹಿಳೆಯರು ಪಾದ್ರಿ ವಿರುದ್ಧ ವಂಚನೆ ಹಾಗೂ ಲೈಂಗಿಕ ಕಿರುಕುಳದ ದೂರು ದಾಖಲು ಮಾಡಿದ್ದರು. ಮಹಿಳೆಯರ ದೂರು ಹಿನ್ನೆಲೆ ಪಾದ್ರಿ ವಿರುದ್ಧ ಎರಡು ಪ್ರತ್ಯೇಕ ಎಫ್‍ಐಆರ್ ದಾಖಲಾಗಿತ್ತು.

ಎಫ್‍ಐಆರ್ ದಾಖಲಿಸಿದ ಬೆನ್ನಲ್ಲೇ ಪಾದ್ರಿ ರವಿಕುಮಾರ್ ಹುಡುಕಾಟಕ್ಕೆ ಪೋಲೀಸರು ಬಲೆ ಬೀಸಿದ್ದರು. ಬಳಿಕ ಶ್ವೇತಾಳ ಬೆಂಗಳೂರಿನ ಸ್ನೇಹಿತರ ಮನೆಯಲ್ಲಿ ಅಡಗಿ ಕುಳಿತಿದ್ದ ಆರೋಪಿ ಪಾದ್ರಿ ರವಿಯನ್ನು ಬಂಧಿಸಿ ಬಳ್ಳಾರಿಗೆ ಕರೆತರಲಾಗಿದೆ. ಆರೋಪಿಯನ್ನು ಇಂದು ಕೋರ್ಟ್ ಗೆ ಹಾಜರುಪಡಿಸಲಾಗಿದ್ದು, ಈ ವೇಳೆ ಶ್ವೇತಾ ಮನೆಯವರು ಹಾಗೂ ಮಹಿಳಾ ಸಂಘಟನೆಯ ಕಲ ಮಹಿಳೆಯರು ರವಿಗೆ ಚೀಮಾರಿ ಹಾಕಿದ್ದಾರೆ. ಮಹಿಳೆಯೊಬ್ಬರು ತನ್ನ ಕೈಯಲ್ಲಿದ್ದ ಮೊಬೈಲ್ ಒಗೆದು ಆಕ್ರೋಶ ಹೊರ ಹಾಕಿದ್ದಾರೆ. ಬಳಿಕ ಮಧ್ಯ ಪ್ರವೇಶ ಮಾಡಿದ ಪೊಲೀಸರು ರವಿಯನ್ನು ಕೋರ್ಟ್ ಗೆ ಹಾಜರು ಪಡಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!