ಕಾರ್ಕಳ: ಹ್ಯಾಪಿ ನ್ಯೂ ಇಯರ್ ಬರೆಯುತ್ತಿದ್ದ ವೇಳೆ ಕಾರು ಡಿಕ್ಕಿ, ಇರ್ವರ ಮೃತ್ಯು

ಕಾರ್ಕಳ:(ಉಡುಪಿ ಟೈಮ್ಸ್ ವರದಿ) ಬಜಗೋಳಿಯ ಮಿಯ್ಯಾರು ರಾಷ್ಟ್ರೀಯ ಹೆದ್ದಾರಿಯಲ್ಲಿ ಹೊಸ ವರ್ಷಕ್ಕೆ ಸ್ವಾಗತ ಕೋರುವ “ಹ್ಯಾಪಿ ನ್ಯೂ ಇಯರ್‌- 2021″ ಎಂದು ಬರೆಯುತ್ತಿದ್ದ ವೇಳೆ ಇಕೋ ಕಾರು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಯುವಕರು ದಾರುಣವಾಗಿ ಸಾವನ್ನಪ್ಪಿದ ಘಟನೆ ಗುರುವಾರ ರಾತ್ರಿ ನಡೆದಿದೆ.

ಮೃತರನ್ನು ಬಿಜಾಪುರ ಮೂಲಕ ಶರಣು(26) ಸಿದ್ದಪ್ಪ (35) ಎಂದು ಗುರುತಿಸಲಾಗಿದೆ. 
ಕಾರ್ಕಳ ತಾಲೂಕಿನ ಮಿಯ್ಯಾರು ಗ್ರಾಮದ ಕಾಜರಬೈಲುವಿನ  ಉದಯಕುಮಾರ್ ಎಂಬುವವರ ಮೂಕಾಂಬಿಕಾ ಅರ್ಥ್ ಮೂವರ್ಸ್  ನಲ್ಲಿ  ಜೆ ಸಿ ಬಿ ಹಾಗೂ ಹಿಟಾಚಿ ಆಪರೇಟರ್ ಗಳಾದ ಬಿಜಾಪುರ ಮೂಲದ ಶರಣು, ಸಿದ್ದಪ್ಪ, ತೌಸಿಪ್, ಬಸವರಾಜ ಎಂಬವರು ಹೊಸ ವರುಷದ ಪ್ರಯುಕ್ತ ನಿನ್ನೆ ರಾತ್ರಿ, 10.20 ರ ಸುಮಾರಿಗೆ ಹ್ಯಾಪಿ ನ್ಯೂ ಇಯರ್ ಎಂದು ಬರೆಯಲು ರಸ್ತೆ ಬದಿಯಲ್ಲಿ ಪೇಂಟ್ ಹಿಡಿದುಕೊಂಡು ನಿಂತಿದ್ದರು.
 ಈ ವೇಳೆ  ಬಜಗೋಳಿ ಕಡೆಯಿಂದ ಕಾರ್ಕಳ ಕಡೆಗೆ ಅತೀ ವೇಗವಾಗಿ ಬಂದ ಕಾರ್ ರಸ್ತೆ ಬದಿಯಲ್ಲಿ ನಿಂತಿದ್ದವರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಶರಣ್  ಎಂಬುವವರು ಮೃತಪಟ್ಟಿದ್ದಾರೆ.

ಅಪಘಾತದಲ್ಲಿ ಸಿದ್ದಪ್ಪ ಎಂಬವರಿಗೆ ತೀವ್ರ ತರಹದ ಗಾಯವಾಗಿದ್ದು ಆಸ್ಪತ್ರೆಗೆ ದಾಖಲಿಸುವ ಸಂದರ್ಭ ಕೊನೆಯುಸಿರು ಎಳೆದಿದ್ದಾರೆ. ಇನ್ನು ತೌಸಿಫ್ ಹಾಗೂ ಬಸವರಾಜ್ ಎಂಬವರು ಕಾರ್ಕಳ ಸರಕಾರಿ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!