ಉಡುಪಿ: ಕಲಾ ಸಂಘಟಕ ಡಾ. ತಲ್ಲೂರು ಶಿವರಾಮ ಶೆಟ್ಟಿಯವರ ಕೃತಿ ಬಿಡುಗಡೆ

ಉಡುಪಿ: ಖ್ಯಾತ ಬರಹಗಾರ, ಕಲಾ ಸಂಘಟಕ ಮತ್ತು ಉದ್ಯಮಿ ಡಾ. ತಲ್ಲೂರು ಶಿವರಾಮ ಶೆಟ್ಟಿಯವರ‌ ನೂತನ ‌ಕೃತಿ ಕಲಾ ಸಂಚಯ ‘ದಕ್ಷಿಣ ಭಾರತದ ಕೆಲವು ಅನುಷ್ಠಾನ ಕಲೆಗಳು’ ಕೃತಿಯನ್ನು ಇಂದು ಸೋಮವಾರ ಪರ್ಯಾಯ ಶ್ರೀಅದಮಾರು ಮಠಾಧೀಶರಾದ ಪರಮ ಪೂಜ್ಯ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು ಲೋಕಾರ್ಪಣೆಗೈದು ಆಶೀರ್ವದಿಸಿದರು.

ಈ‌ ಸಂದರ್ಭದಲ್ಲಿ ಅವರು ಕಲೆ ಮತ್ತು ಸಂಸ್ಕೃತಿಯ ಏಳಿಗೆಗೆ ಡಾ. ಶಿವರಾಮ ಶೆಟ್ಟಿಯವರು ನಿರಂತರ ಕೊಡುಗೆಯನ್ನು ಮುಕ್ತ ಕಂಠದಿಂದ ಶ್ಲಾಘಿಸಿ, ಈ ಕೃತಿಯನ್ನು ಕೊಂಡಾಡಿದರು.

ಈ ಸಂದರ್ಭದಲ್ಲಿ ಹಿರಿಯ ಉದ್ಯಮಿ ಗೋಪಾಲ ಸಿ. ಬಂಗೇರ, ಸಾಮಾಜಿಕ ಮುಂದಾಳು ಸಾಧನಾ ಕಿಣಿ, ಶಿಕ್ಷಣ ತಜ್ಞ ಡಾ. ನೇರಿ ಕರ್ನೇಲಿಯೊ, ಭಾರತೀಯ ರೆಡ್ ಕ್ರಾಸ್ ಸೊಸೈಟಿಯ ಕಾರ್ಯದರ್ಶಿ ಕೆ. ಜಯರಾಮ ಆಚಾರ್ಯ, ಲಯನ್ಸ್ ಸಂಸ್ಥೆಯ ಮುಖಂಡರಾದ ಸುನೀಲ್ ಕುಮಾರ್ ಶೆಟ್ಟಿ, ಕಿರಣ್ ರಂಗಯ್ಯ ಮತ್ತು ಉಡುಪಿ ಕರ್ನಾಟಕ ಜಾನಪದ ಪರಿಷತ್ತಿನ ಕಾರ್ಯದರ್ಶಿ ರವಿರಾಜ ನಾಯಕ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!