ಬೈಂದೂರು: ಪೊಲೀಸರಿಂದ 12 ಗೋವುಗಳ ರಕ್ಷಣೆ

ಬೈಂದೂರು: ಗೋ ಕಳ್ಳತನವನ್ನು ಬೆನ್ನತ್ತಿದ ಬೈಂದೂರು ಪೋಲಿಸರು ಗೋ ಕಳ್ಳರಿಂದ 12 ಗೋವುಗಳನ್ನು ರಕ್ಷಿಸಿದ ಘಟನೆ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಶಿರೂರು ಚೆಕ್ ಪೋಸ್ಟ್ ಬಳಿ ನೆಡೆದಿದೆ.

ನಾವುಂದ ಮೂಲದ ಜಲೀಲ್ ಎಂಬ ವ್ಯಕ್ತಿ ಗೋ ಸಾಗಾಟ ಮಾಡುತ್ತಿರುವ  ಬಗ್ಗೆ ಖಚಿತ ಮಾಹಿತಿ ಪಡೆದ ಪೋಲಿಸರು ಶಿರೂರು ಚೆಕ್ ಪೋಸ್ಟ್ ಬಳಿ ಗೋ ಕಳ್ಳರಿಗಾಗಿ ಕುಳಿತಿದ್ದರು. ಈ ವೇಳೆ  ನಾವುಂದದಿಂದ ಭಟ್ಕಳಕ್ಕೆ ವಾಹನದಲ್ಲಿ ಗೋವುಗಳನ್ನು ಸಾಗಟ ಮಾಡುತ್ತಿದ್ದುದು ಪತ್ತೆಯಾಗಿದೆ. ಪೊಲೀಸರನ್ನು ಕಂಡ ಗೋ ಕಳ್ಳರು ವಾಹನ ಬಿಟ್ಟು ಪರಾರಿಯಾಗಿದ್ದಾರೆ.

ಬೈಂದೂರು ಪೋಲಿಸರು ಮಿಂಚಿನ ಕಾರ್ಯಚರಣೆ ನಡೆಸಿದ್ದು, ಹನ್ನೆರಡು ಗೋವುಗಳನ್ನು ಸಾವಿನ ದವಡೆಯಿಂದ ಪಾರು ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಬೈಂದೂರು ಸರ್ಕಲ್ ಇನ್ಸ್ಪೆಕ್ಟರ್ ಸಂತೋಷ್ ಕಾಯ್ಕಿಣಿ, ಹಾಗೂ ಪಿ.ಎಸ್.ಐ ಸಂಗೀತ ನೇತ್ರತ್ವದಲ್ಲಿ ಕಾರ್ಯಚರಣೆ ನಡೆಸಲಾಗಿದ್ದು, ಬೈಂದೂರು ಠಾಣೆಯಲ್ಲಿ ಪ್ರಕರಣ  ದಾಖಲಾಗಿದೆ. 

Leave a Reply

Your email address will not be published. Required fields are marked *

error: Content is protected !!