ಆಟೋ ರಿಕ್ಷಾ ಡಿಕ್ಕಿ – ಸೈಕಲ್ ಸವಾರ ಸಾವು

ಕಾರ್ಕಳ: ಸೈಕಲ್ ಗೆ ಆಟೋ ರಿಕ್ಷಾ ಡಿಕ್ಕಿ ಹೊಡೆದು ಸೈಕಲ್ ಸವಾರ ಮೃತಪಟ್ಟ ಘಟನೆ ಕಾರ್ಕಳದ ಮುಡಾರು ಗ್ರಾಮದ ಅಬ್ಬೆಂಜಾಲು ಬಳಿ ನಡೆದಿದೆ. ಮೃತರನ್ನು ಮುಡಾರು ಗ್ರಾಮದ  ನೋಣಯ್ಯ ಎಂದು ಗುರುತಿಸಲಾಗಿದೆ.

ಇವರು ನಿನ್ನೆ ಅಬ್ಬೆಂಜಾಲು ಬಳಿ ಸೈಕಲ್ ನಲ್ಲಿ ಬರುತ್ತಿದ್ದಾಗ ಬಜಗೋಳಿ ಕಡೆಯಿಂದ ಕಡಾರಿ ಕಡೆಗೆ ತೆರಳುತ್ತಿದ್ದ ಆಟೋ ರಿಕ್ಷಾ ಡಿಕ್ಕಿ ಹೊಡೆದಿದೆ. ಪರಿಣಾಮ ನೋಣಯ್ಯ ಅವರು ಸೈಕಲ್ ಸಮೇತ ರಸ್ತೆಗೆ ಬಿದ್ದಿದ್ದು, ಅವರಿಗೆ ತಲೆಯ ಹಿಂಬದಿ, ಹಣೆ ಹಾಗೂ ಕೈಗೆ ಗಾಯಗಳಾಗಿರುತ್ತದೆ. ತಕ್ಷಣ ಅವರನ್ನು ಕಾರ್ಕಳದ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ನೋಣಯ್ಯ ಅವರನ್ನು ಪರೀಕ್ಷಿಸಿದ ವೈದ್ಯರು ಅವರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!