ತಮ್ಮನ್ನು ಬಂಡವಾಳಶಾಹಿಗಳಿಗೆ ಅರ್ಪಿಸಿಕೊಂಡಿರುವ ಮೋದಿಯವರಿಂದ ಈ ಪ್ರತಿಕ್ರಿಯೆ ನಿರೀಕ್ಷಿತ – ಗುಂಡೂರಾವ್

ಬೆಂಗಳೂರು: ತಮ್ಮನ್ನು ತಾವೇ ಬಂಡವಾಳಶಾಹಿಗಳಿಗೆ ಅರ್ಪಿಸಿಕೊಂಡಿರುವ ಮೋದಿಯವರಿಂದ ಈ ಪ್ರತಿಕ್ರಿಯೆ ನಿರೀಕ್ಷಿತ ಎಂದು ಕಾಂಗ್ರೆಸ್ ಮುಖಂಡ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ವಿರೋಧ ಪಕ್ಷಗಳು ರಾಜಕೀಯ ಲಾಭಕ್ಕಾಗಿ ರೈತರ ದಾರಿತಪ್ಪಿಸುತ್ತಿದೆ, ಕೃಷಿ ಕ್ಷೇತ್ರದ ಸುಧಾರಣೆಗಾಗಿ ಜಾರಿಗೆ ತಂದಿರುವ ಮೂರು ಕಾಯ್ದೆಗಳನ್ನು ರದ್ದುಪಡಿಸುವ ಪ್ರಶ್ನೆಯೇ ಇಲ್ಲ ಎಂಬ ಪ್ರಧಾನಿ ಮೋದಿ ಹೇಳಿಕೆಗೆ ಪ್ರತಿಕ್ರಿಯಿಸಿರುವ ಅವರು, ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ದ ಟ್ವೀಟ್ ಮೂಲಕ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ತಮ್ಮನ್ನು ತಾವೇ ಬಂಡವಾಳಶಾಹಿಗಳಿಗೆ ಅರ್ಪಿಸಿಕೊಂಡಿರುವ ಮೋದಿಯವರಿಂದ ಈ ಪ್ರತಿಕ್ರಿಯೆ ನಿರೀಕ್ಷಿತ. ಕರಾಳ ಕೃಷಿ ಕಾಯ್ಧೆ ರದ್ದು ಮಾಡುವುದಿಲ್ಲ ಎಂಬ ಹೇಳಿಕೆಯ ಹಿಂದೆ ಕಾರ್ಪೋರೇಟ್ ಹಿತಾಸಕ್ತಿ ಅಡಗಿದೆ. ತಮ್ಮದು ರೈತ ಸರ್ಕಾರ ಎಂಬ ಬೂಟಾಟಿಕೆ ಬಿಟ್ಟು ಬಂಡವಾಳಶಾಹಿಗಳ ಕೃಪಾಪೋಷಿತ ಸರ್ಕಾರ ಎಂಬುದನ್ನು ಒಪ್ಪಿಕೊಳ್ಳಲಿ ಎಂದು ತಮ್ಮ ಟ್ವೀಟ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!