ಸುಬ್ರಹ್ಮಣ್ಯ – ಕೊಡಗು ಗಡಿಭಾಗದಲ್ಲಿ ಭಾರೀ ಶಬ್ಧ- ಕಂಪನ: ಮತ್ತೆ ಭಯ ಭೀತರಾದ ಜನತೆ!

ಸುಬ್ರಹ್ಮಣ್ಯ:  ತಪ್ಪಲು ಪ್ರದೇಶದ ಹಲವೆಡೆಗಳಲ್ಲಿ ಕಳೆದ ರಾತ್ರಿ ಭೂಮಿ ಕಂಪಿಸಿದ ಮತ್ತು ವಿಚಿತ್ರ ಶಬ್ಧದ ಅನುಭವವಾದ ಬಗ್ಗೆ ತಪ್ಪಲು ಪ್ರದೇಶದ ಜನರು ಮಾಹಿತಿ ನೀಡಿದ್ದಾರೆ.

ದ.ಕ ಮತ್ತು ಕೊಡಗು ಗಡಿಭಾಗದ ಕೊಲ್ಲಮೊಗ್ರು, ಕಲ್ಮಕಾರು. ಹರಿಹರ, ಬಾಳುಗೋಡು, ಐನಕಿದು ದೇವಚಳ್ಲ ಗ್ರಾಮದ ಕರಂಗಲ್ಲು, ದೊಡ್ಡಕಜೆ ಭಾಗಗಳಲ್ಲಿ ಕೂಡ ಜನ ಭೂಮಿ ಕಂಪಿಸಿದ, ಅನುಭವ ಆಗಿರುವುದರ ಬಗ್ಗೆ ಹೇಳಿಕೊಳ್ಳುತ್ತಿದ್ದಾರೆ.

ಡಿ.13ರ ರಾತ್ರಿ ಮೊದಲ ಭಾರಿಗೆ ಹರಿಹರ ಪಳ್ಳತ್ತಡ್ಕ ಗ್ರಾಮದಲ್ಲಿ ಭಾರಿ ಶಬ್ಧ ಕೇಳಿಸಿದ್ದು ಬೆಳಕಿಗೆ ಬಂದಿತ್ತು. ಅದೀಗ ಇತರ ಕಡೆಗಳಿಗೂ ವ್ಯಾಪಿಸಿದೆ. ಈ ಭಾಗದ ಜನರಲ್ಲಿ ಭೀತಿ ಜೊತೆಗೆ ಕುತೂಹಲ ಮನೆ ಮಾಡಿದೆ. ಇದೀಗ ಪುಪ್ಪಗಿರಿ ತಪ್ಪಲಿನ ಗ್ರಾಮಗಳಲ್ಲಿ ಈ ಘಟನೆ ನಡೆದಿದ್ದು, ಎರಡು ವರುಷಗಳ ಹಿಂದೆ  ಭಾಗದಲ್ಲಿ ಭಾರಿ ಜಲಸ್ಪೋಟ ಉಂಟಾಗಿತ್ತು ಎನ್ನಲಾಗಿದೆ. ಇದೀಗ ಮತ್ತೆ ಭೂಕಂಪನ ಶಬ್ಧದ ಅನುಭವ ಗುಡ್ಡ ಪ್ರದೇಶದ ವಾಸಿಗಳಲ್ಲಿ ಭಯದ ವಾತಾವರಣ ಮನೆ ಮಾಡಿದೆ.

Leave a Reply

Your email address will not be published. Required fields are marked *

error: Content is protected !!