ಕೊರೊನಾದ ಸಂಕಷ್ಟದ ವೇಳೆ ಸಂಭ್ರಮಾಚರಣೆಯ ಅಗತ್ಯ ಇದೆಯೇ…?: ಡಾ.ಕೆ. ಸುಧಾಕರ್ ಪ್ರಶ್ನೆ

ಬೆಂಗಳೂರು: ಯುಗಾದಿ ನಮ್ಮ ಹೊಸ ವರ್ಷ. ಜನವರಿ 1 ರ ಹೊಸ ವರ್ಷಾಚರಣೆ ಸಂಸ್ಕೃತಿಯಲ್ಲ. ನಾಡು ಕೊರೊನಾದ ಸಂಕಷ್ಟದಲ್ಲಿರುವ ಈ ಸಂದರ್ಭದಲ್ಲಿ ಹೊಸ ವರ್ಷದ ಸಂಭ್ರಮಾಚರಣೆಯ ಅಗತ್ಯ ಇದೆಯೇ..? ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್ ರಾಜ್ಯದ ಜನತೆಯನ್ನು ಕೇಳಿದ್ದಾರೆ.ಬೆಂಗಳೂರಿನಲ್ಲಿ ಈ ಬಗ್ಗೆ ಮಾತನಾಡಿದ ಅವರು, ರಾಜ್ಯಾದ್ಯಂತ ಹೊಸವರ್ಷ ಹಾಗೂ ಕ್ರಿಸ್‌ಮಸ್ ವೇಳೆ ತೆಗೆದುಕೊಳ್ಳಬೇಕಿರುವ ಕ್ರಮಗಳ ಕುರಿತಾಗಿ ಚರ್ಚೆ ಮಾಡಲಾಗುತ್ತಿದೆ. ಈ ವಿಚಾರವಾಗಿ ಸಿಎಂ ಬಿ.ಎಸ್ ಯಡಿಯೂರಪ್ಪ ಅವರೊಂದಿಗೆ ಚರ್ಚೆ ನಡೆಸಿ ಅಂತಿಮ ತೀರ್ಮಾನವನ್ನು ಕೈಗೊಳ್ಳಲಾಗುವುದು ಎಂದರು.

ಇನ್ನು ರಾಜ್ಯದಲ್ಲಿ ಕರ್ಫ್ಯೂ ಜಾರಿ ಕುರಿತಂತೆ ಪ್ರತಿಕ್ರಿಯಿಸಿ, ಈ ಸಂದರ್ಭ ಕರ್ಫ್ಯೂ ಜಾರಿಯ ಅವಶ್ಯಕತೆ ಇದೆ ಎಂದೆನಿಸುತ್ತಿಲ್ಲ. ಈ ಬಗ್ಗೆ ತಜ್ಞರೊಂದಿಗೆ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದ ಅವರು, ಇದೇ ಮೊದಲ ಬಾರಿಗೆ ಕಡ್ಡಾಯ ಸೇವೆಗಾಗಿ ರಾಜ್ಯದಾದ್ಯಂತ ನಿಯೋಜನೆ ಮಾಡಿರುವ ರೆಸಿಡೆಂಟ್ ವೈದ್ಯರಿಗೆ  ಪಾವತಿಸಬೇಕಾದ ವೇತನ ತಾಂತ್ರಿಕ ಕಾರಣದ ಹಿನ್ನೆಲೆ  ಬಿಡುಗಡೆ ತಡವಾಗಿದ್ದು, ವಾರದೊಳಗೆ ಅವರಿಗೆ ಪಾವತಿಸಬೇಕಾದ ವೇತನ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!