ಕೆಮ್ಮಣ್ಣು ಗಣಪತಿ ಸಹಕಾರಿ ವ್ಯ.ಸಂಘದ “ಶತಾಭಿವಂದನಂ- 2023”- ಸಮಾರೋಪದ ಆಮಂತ್ರಣ ಪತ್ರಿಕೆ ಬಿಡುಗಡೆ
ಉಡುಪಿ ಅ.11 (ಉಡುಪಿ ಟೈಮ್ಸ್ ವರದಿ): ಕೆಮ್ಮಣ್ಣು ಗಣಪತಿ ಸಹಕಾರಿ ವ್ಯವಸಾಯಕ ಸಂಘದ ಶತಮಾನೋತ್ಸವ ಆಚರಣೆಯ “ಶತಾಭಿವಂದನಂ- 2023” ಕಾರ್ಯಕ್ರಮದ ಸಮಾರೋಪ ಸಮಾರಂಭದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಕೆಮ್ಮಣ್ಣುವಿನ ದಿ.ರಾಜಗೋಪಾಲ್ ಭಟ್ ವೇದಿಕೆಯಲ್ಲಿ ಗುರುವಾರ ನಡೆಯಿತು.
ಕಾರ್ಯಕ್ರಮದಲ್ಲಿ ಸಾಮಾಜಿಕ ಚಿಂತಕ, ವಾಗ್ಮಿ ದಾಮೋದರ್ ಶರ್ಮಾ ಅವರು ಮಾತನಾಡಿ, ಸಂಸ್ಥೆಯು ಅಗತ್ಯವಿರುವವರಿಗೆ ನಾನಿದ್ದೇನೆ ಎಂಬ ಭರವಸೆ ನೀಡಿದೆ. ಉತ್ತಮ ಕೆಲಸ ಮಾಡುವ ಮೂಲಕ ಸಂಸ್ಥೆ ಇನ್ನಷ್ಟು ಅಭಿವೃದ್ಧಿ ಹೊಂದಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ಸತೀಶ್ ಶೆಟ್ಟಿ ಅವರು ವಹಿಸಿದ್ದರು. ಈ ಸಂದರ್ಭದಲ್ಲಿ ಕರಾವಳಿ ಕ್ರೆಡಿಟ್ ಕೊ.ಸೊಸೈಟಿ ಅಧ್ಯಕ್ಷ ಉಮೇಶ ಶೆಟ್ಟಿ, ಆನಂದ್ ರಾವ್, ಲಕ್ಷ್ಮೀ ಭಟ್, ನಿವೃತ್ತ ಪ್ರಧಾನ ವ್ಯವಸ್ಥಾಪಕ ದೇಜಪ್ಪ ಅಮೀನ್, ಸಲಹಾ ಸಮಿತಿ ಸದಸ್ಯರಾದ ಮಾಧವ, ಸುಧಾಕರ ಆಚಾರ್ಯ, ಮನೋಹರ ಶೆಟ್ಟಿ ತೋನ್ಸೆ, ಎಂ.ಎಸ್ ಭಟ್, ನಂದಕಿಶೋರ್, ಗೋಪಾಲಕೃಷ್ಣ, ಸಿಇಓ ಮಹೇಶ ಸಾಲ್ಯಾನ್, ಸತೀಶ್ ಶೆಟ್ಟಿ, ಸಂಘದ ಉಪಾಧ್ಯಕ್ಷ ಅಫ್ಜಲ್ ಸಾಹೇಬ್, ನಿರ್ದೇಶಕರಾದ ಗೋಪಾಲಕೃಷ್ಣ ಹೆಗ್ಡೆ, ಲತಾ, ನಾರಾಯಣ ಬಂಗೇರ, ರಾಘವೇಂದ್ರ ಪ್ರಸಾದ್ ಉಪಸ್ಥಿತರಿದ್ದರು. ಸತೀಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.