ಉಡುಪಿ: “ಏರ್ಲಾ ಗ್ಯಾರಂಟಿ ಅತ್ತ್” ತುಳು ನಾಟಕ ಪ್ರದರ್ಶನ

Oplus_131072

ಉಡುಪಿ: ಶ್ರೀವಿರಾಡ್ವಿಶ್ವಕರ್ಮ ಬ್ರಾಹ್ಮಣ ಶಿಲ್ಪ ಕಲಾ ಸಂಘ ಅಂಬಲಪಾಡಿ, ಇದರ ಕಟ್ಟಡದ ಸಹಾಯಾರ್ಥ ಉಡುಪಿ ಪುರಭವನದಲ್ಲಿ, “ಏರ್ಲಾ ಗ್ಯಾರಂಟಿ ಅತ್ತ್” ಎಂಬ ನಾಟಕ ಪ್ರದರ್ಶನವನ್ನು ಅಂಬಲಪಾಡಿ ಶ್ರೀ ಜನಾರ್ಧನ ಮತ್ತು ಮಹಾಕಾಳಿ ದೇವಸ್ಥಾನದ ಧರ್ಮದರ್ಶಿ ನಿ.ಬೀ.ವಿಜಯ ಬಲ್ಲಾಳ್ ಉದ್ಘಾಟಿಸಿದರು.

ಚಾಪರ್ಕ ತಂಡದ ದೇವದಾಸ್ ಕಾಪಿಕಾಡ್ ರವರನ್ನು ಅಭಿನಂದಿಸಲಾಯಿತು. ದೋಹಾ ಕತಾರ್ ನ ಸ್ವರ್ಣೋದ್ಯಮಿ, ಉಡುಪಿ ಅಕ್ಷಯ ಟವರ್ಸ್ ಮಾಲಕ ಕೆ.ವಿಶ್ವನಾಥ ರಾವ್ ನೇಜಾರ್, ಮುಖ್ಯ ಅತಿಥಿಯಾಗಿದ್ದರು. ಸಂಘದ ಗೌರವಾಧ್ಯಕ್ಷ, ಮೊಕ್ತೇಸರ ವ್ಯಾಸರಾಯ ಆಚಾರ್ಯ ಅಂಬಲಪಾಡಿ, ಶ್ರೀಕಾಳಿಕಾ ಮಹಿಳಾ ಮಂಡಳಿ ಅಧ್ಯಕ್ಷೆ ವಿಲಾಸಿನಿ ಎಸ್.ಆಚಾರ್ಯ ಉಪಸ್ಥಿತರಿದ್ದರು. ಅಧ್ಯಕ್ಷ ಜಗದೀಶ ಆಚಾರ್ಯ ಕಪ್ಪೆಟ್ಟು ಸ್ವಾಗತಿಸಿ ಪ್ರಸ್ತಾಪಿಸಿದರು. ಕಾರ್ಯದರ್ಶಿ ಹರೀಶ ಆಚಾರ್ಯ ಅಂಬಲಪಾಡಿ, ಕೋಶಾಧಿಕಾರಿ ವಿಶ್ವನಾಥ ಆಚಾರ್ಯ ಕಿದಿಯೂರು, ಮತ್ತು ಸದಸ್ಯರು ಸಹಕರಿಸಿದರು. ಸ್ವಾತಿ ಕೆ.ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

error: Content is protected !!