ಬೈಂದೂರು ಮಾಜಿ ಶಾಸಕ ಕೆ. ಲಕ್ಷ್ಮೀನಾರಾಯಣ ಅವರಿಗೆ ಶ್ರದ್ಧಾಂಜಲಿ ಸಭೆ

ಬೈಂದೂರು ಸೆ.28: ಶುಕ್ರವಾರ ನಿಧನರಾದ ಬೈಂದೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಕೆ ಲಕ್ಷ್ಮೀನಾರಾಯಣ ಅವರಿಗೆ ಬೈಂದೂರು ಬಿಜೆಪಿ ಮಂಡಲ, ಬಿಜೆಪಿ ಯುವ ಮೋರ್ಚಾ, ಹಾಗೂ ಬೈಂದೂರಿನ ನಾಗರೀಕರ ವತಿಯಿಂದ ಸೇನೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಸಾಂಕೇತಿಕವಾಗಿ ಶ್ರದ್ಧಾಂಜಲಿ ಸಮರ್ಪಿಸಲಾಯಿತು.

ಬೈಂದೂರು ಬಿಜೆಪಿ ಮಂಡಲದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಮಾತನಾಡಿ, ಬೈಂದೂರಿನಲ್ಲಿ ಶ್ರೀ ಲಕ್ಷ್ಮಿ ಕನ್ಸ್ಷಕ್ಷನ್ ಸಂಸ್ಥೆಯನ್ನು ಸ್ವಾಪಿಸಿ, ಉದ್ಯಮಿಗಳಾಗಿ ಖ್ಯಾತಿಗಳಿಸಿದ್ದರು, ರಾಜಕೀಯದ ಅಪಾರ ಆಸಕ್ತಿ ಹೊಂದಿದ್ದರು, ಬೈಂದೂರು ಕ್ಷೇತ್ರದಲ್ಲಿ ಬಿಜೆಪಿ ಪಕ್ಷದ ಮೂರು ಭಾರಿ ಅಭ್ಯರ್ಥಿ ಸ್ಪರ್ಧಿಸಿ, ಎರಡು ಬಾರಿ ಸೋಲು ಕಂಡಿದ್ದರು ಮೂರನೇ ಬಾರಿ ಜಯಗಳಿಸಿ, ಬೈಂದೂರು ವಿಧಾನಸಭಾ ಕ್ಷೇತ್ರವನ್ನು ಅಭಿವೃದ್ಧಿಗಾಗಿ ಸಾಕಷ್ಟು ಶ್ರಮಿಸಿದ್ದಾರೆ. ಬೈಂದೂರು ತಾಲೂಕು ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಮುಂದಿನ ದಿನಗಳಲ್ಲಿ ಬೈಂದೂರಿನಲ್ಲಿ ನಡೆಯುವ ಅಭಿವೃದ್ಧಿ, ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ನಮ್ಮನ್ನು ಆರ್ಶೀವಾದ ಮಾಡಲಿ ಎಂದು ಹೇಳಿದರು.

ಶುಕ್ರವಾರ ಸಂಜೆ ಬನಶಂಕರಿಯ ಚಿತಾಗಾರದಲ್ಲಿ ಅಂತಿಮ ಸಂಸ್ಕಾರದ ವೇಳೆ ಬೈಂದೂರಿನ ರಥಬೀದಿಯ ಅಂಗಡಿ ಮುಂಗಟ್ಟುಗಳು ಒಂದು ಗಂಟೆಗಳ ಕಾಲ ಬಂದ್ ಮಾಡಿ, ಮಾಜಿ ಶಾಸಕ ಕೆ ಲಕ್ಷ್ಮೀನಾರಾಯಣ ಅವರ ಆತ್ಮಕ್ಕೆ ಗೌರವ ಸಲ್ಲಿಸಲಾಯಿತು.

ಬೈಂದೂರು ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷ ಗಜೇಂದ್ರ ಎಸ್ ಬೇಲೆಮನೆ, ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಮಹೇಂದ್ರ ಪೂಜಾರಿ, ಪುಷ್ಪರಾಜ್ ಶೆಟ್ಟಿ ಶಿರೂರು, ದಿನೇಶ್ ಶಿರೂರು, ಪಕ್ಷದ ಕಾರ್ಯಕರ್ತರು, ಬೈಂದೂರಿನ ನಾಗರೀಕರು ಇದ್ದರು.

Leave a Reply

Your email address will not be published. Required fields are marked *

error: Content is protected !!