ಮಲ್ಪೆ: ಬೋಟ್‌ನಲ್ಲಿ ಅಡುಗೆ ಮಾಡುವಾಗ ಬಾಣಲಿಗೆ ಬಿದ್ದು ಯುವಕ ಮೃತ್ಯು

ಮಲ್ಪೆ, ಸೆ.27: ಮಲ್ಪೆ ಮೀನುಗಾರಿಕಾ ಬಂದರಿನೊಳಗೆ ನಿಲ್ಲಿಸಿದ್ದ ಬೋಟಿನಲ್ಲಿ ಕೆಲಸ ಮಾಡುತ್ತಿದ್ದ ಯುವಕನೋರ್ವ ಬಿಸಿ ಎಣ್ಣೆ ಮೇಲೆ ಬಿದ್ದು ಮೃತಪಟ್ಟ ಘಟನೆ ನಡೆದಿದೆ.

ಮೃತರನ್ನು ಅಂಕೋಲ ತಾಲೂಕಿನ ನವೀನ್ ಗೋವಿಂದ (23) ಎಂದು ಗುರುತಿಸಲಾಗಿದೆ. ಇವರು ಆ.5ರಂದು ರಾತ್ರಿ ಮಲ್ಪೆಯ ಧರ್ಮೇಂದ್ರ ಎಂಬುವವರ ಶೇಷಾದ್ರಿ ಬೋಟ್‌ನಲ್ಲಿ ಅಡುಗೆ ಕೆಲಸ ಮಾಡುತ್ತಿರುವಾಗ ಬೋಟ್ ಅಬ್ಬರದ ತೆರೆಗೆ ಅಲುಗಾಡಿತ್ತೆನ್ನಲಾಗಿದೆ. ಈ ವೇಳೆ ನವೀನ್ ಆಯ ತಪ್ಪಿಅಡುಗೆ ಮಾಡುವ ಗ್ಯಾಸ್ ಒಲೆಯ ಮೇಲೆ ಇಟ್ಟಿದ್ದ ಎಣ್ಣೆಯ ಬಾಣಲಿಗೆ ಬಿದ್ದರು.

ಇದರಿಂದ ಅವರ ಮುಖ, ಬಲಕೈ ಸುಟ್ಟು ಹೋಗಿದ್ದು, ಗಂಭೀರವಾಗಿ ಗಾಯಗೊಂಡ ಅವರು ಸೆ.26ರಂದು ರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಮಣಿಪಾಲ ಆಸ್ಪತ್ರೆಯಲ್ಲಿ ಮೃತಪಟ್ಟರೆಂದು ತಿಳಿದುಬಂದಿದೆ ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!