ಉಡುಪಿ ಜಿಲ್ಲಾ ಚಿನ್ನ ಬೆಳ್ಳಿ ಕೆಲಸಗಾರರ ಸಂಘದ ವಾರ್ಷಿಕ ಮಹಾಸಭೆ

ಉಡುಪಿ: ಜಿಲ್ಲಾ ಚಿನ್ನ ಬೆಳ್ಳಿ ಕೆಲಸಗಾರರ ಸಂಘದ ವಾರ್ಷಿಕ ಮಹಾಸಭೆ ಗಾಯತ್ರಿ ಕಲ್ಯಾಣ ಮಂಟಪ ಕುಂಜಿಬೆಟ್ಟಿನಲ್ಲಿ ಶನಿವಾರ ನಡೆಯಿತು.

ಕಾರ್ಯಕ್ರಮವನ್ನು ಶಾಸಕರಾದ ಯಶಪಾಲ್ ಸುವರ್ಣ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಪ್ರಸಾದ್ ರಾಜ್ ಕಾಂಚನ್, ಲೀಡ್ ಬ್ಯಾಂಕಿನ ವಿಭಾಗೀಯ ವ್ಯವಸ್ಥಾಪಕ ಹರೀಶ್ ಜಿ, ನ್ಯಾಯವಾದಿ ಗಂಗಾಧರ ಹೆಚ್ ಎಂ, ಬಾಲಕೃಷ್ಣ ಆಚಾರ್ಯ ಕಪ್ಪೆಟ್ಟು, ಬಿ ಕುಶ ಕುಮಾರ್, ಕೆ ವೆಂಕಟೇಶ್ ಆಚಾರ್ಯ, ಎಂ ರಮೇಶ್ ಆಚಾರ್ಯ, ಪ್ರಶಾಂತ್ ಆಚಾರ್ಯ ನೆಜಾರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಗೋಪಾಲ ಆಚಾರ್ಯ ನೀಲಾವರ ಹಾಗೂ ಗಣಪಯ್ಯ ಆಚಾರ್ಯ ಪೆರ್ಡೂರು ಇವರನ್ನು ಸನ್ಮಾನಿಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ರವಿಚಂದ್ರ ಆಚಾರ್ಯ ಮಾರಳಿ ವಹಿಸಿದ್ದರು. ಕಾರ್ಯದರ್ಶಿ ರಘುನಾಥ್ ಆಚಾರ್ಯ ವರದಿ ವಾಚಿಸಿದರು, ಕೋಶಧಿಕಾರಿ ದಿವಾಕರ್ ವಿ ಆಚಾರ್ಯ ಲೆಕ್ಕಪತ್ರವನ್ನು ಮಂಡಿಸಿದರು. ಕಿಶೋರ್ ಆಚಾರ್ಯ ಸ್ವಾಗತಿಸಿದರು. ಜಯಪ್ರಕಾಶ್ ಆಚಾರ್ಯ ಕುತ್ಪಾಡಿ ನೂತನ ಕಾರ್ಯಕಾರಿ ಸಮಿತಿಯ ಪಟ್ಟಿ ವಾಚಿಸಿದರು. ರತ್ನಾಕರ್ ಆಚಾರ್ಯ ಧನ್ಯವಾದ ಸಮರ್ಪಿಸಿದರು ಕಾರ್ಯಕ್ರಮ ವನ್ನು ಹರೀಶ್ ಆಚಾರ್ಯ ನಿರೂಪಿಸಿದರು.

Leave a Reply

Your email address will not be published. Required fields are marked *

error: Content is protected !!