ಬ್ರಹ್ಮಾವರ: ಆಧಾರ್ ತಿದ್ದುಪಡಿ- ಅಂಚೆ ಇಲಾಖೆಯ ಸೌಲಭ್ಯಗಳ ಮಾಹಿತಿ ಉದ್ಘಾಟನೆ

ಬ್ರಹ್ಮಾವರ :ಸೆ :14:ಭಾರತೀಯ ಅಂಚೆ ಇಲಾಖೆ ಉಡುಪಿ ವಿಭಾಗ, ಅಂಬೇಡ್ಕರ್ ಯುವಕ ಮಂಡಲ ಹಾಗೂ ಬಾಬಾಸಾಹೇಬ್ ಅಂಬೇಡ್ಕರ್ ವೆಲ್ಫೇರ್ ಟ್ರಸ್ಟ್, ತೆಂಕು ಬಿರ್ತಿ, ಬ್ರಹ್ಮಾವರ ಇವರ ಆಶ್ರಯದಲ್ಲಿ ಆಧಾರ್ ನೋಂದಣಿ, ತಿದ್ದುಪಡಿ ಹಾಗೂ ಅಪಘಾತ ವಿಮೆ ಮತ್ತು ಇತರ ಅಂಚೆ ಇಲಾಖೆಯ ಸೌಲಭ್ಯಗಳ ಮಾಹಿತಿಗಳಿಗಾಗಿ “ಅಂಚೆ ಜನಸಂಪರ್ಕ ಅಭಿಯಾನ “ವಾರಾಂಬಳ್ಳಿಯ ಅಂಬೇಡ್ಕರ್ ಭವನದಲ್ಲಿ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಉಡುಪಿಯ ಅಂಚೆ ಅಧೀಕ್ಷರಾದ ರಮೇಶ್ ಪ್ರಭು ನೆರವೇರಿಸಿದರು. ಅಧ್ಯಕ್ಷತೆಯನ್ನು ಯುವಕ ಮಂಡಲದ ಹರಿಶ್ಚಂದ್ರ ಕೆ ಡಿ ವಹಿಸಿದ್ದರು.ಅಂಚೆ ನಿರೀಕ್ಷಕ ರಾದ ಶಂಕರ್ ಲಮಾಣಿ ಅಂಚೆ ಇಲಾಖೆಯಲ್ಲಿರುವ ಸೌಲಭ್ಯಗಳನ್ನು ವಿಸ್ತಾರವಾಗಿ ವಿವರಿಸಿದರು, ಮುಖ್ಯ ಅಥಿತಿಗಳಾಗಿ ವಾರಂಬಳ್ಳಿ ಪಂಚಾಯತ್ ಅಧ್ಯಕ್ಷ ನಿತ್ಯಾನಂದ ಬಿ ಆರ್, ಬ್ರಹ್ಮಾವರ ವ್ಯವಸಾಯ ಸೇವಾ ಸಹಕಾರ ಸಂಘದ ನಿರ್ದೇಶಕರಾದ ರಾಜೇಶ್ ಶೆಟ್ಟಿ ಬಿರ್ತಿ,ದಲಿತ ಸಂಘರ್ಷ ಸಮಿತಿಯ ಶ್ಯಾಮರಾಜ್ ಬಿರ್ತಿ,ಅಂಚೆ ಪಾಲಕರಾದ ಗಾಯತ್ರಿ ಆಗಮಿಸಿದ್ದರು. ಅನಿಲ್ ಕುಮಾರ್ ಸ್ವಾಗತಿಸಿದರು, ಪ್ರಶಾಂತ್ ಬಿರ್ತಿ ಕಾರ್ಯಕ್ರಮ ನೀರೂಪಿಸಿದರು. ಶಿವಾನಂದ ಬಿರ್ತಿ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!