ಜಿಲ್ಲೆಯ ಸೌಹರ್ದತೆ ಕಾಪಾಡುವುದರ ಜೊತೆ ಅನುದಾನ ತರುವ ಜವಬ್ದಾರಿಯುತ ಕೆಲಸ ಮಾಡಿ- ಕಾಂಚನ್

ಉಡುಪಿ: ಅನುದಾನ ಬಿಡುಗಡೆಯಾಗಿಲ್ಲ ಎಂದು ಸುಳ್ಳು ಹೇಳಿಕೆಗಳನ್ನು ಹೇಳುತ್ತಾ, ಗಂಡಸುತನ ಪ್ರಶ್ನೆ ಮಾಡುವ ಹೇಳಿಕೆ ಒಬ್ಬ ಶಾಸಕನಾಗಿ ಯಶ್ಪಾಲ್ ಸುವರ್ಣರಿಗೆ ಶೋಭೆ ತರುವುದಿಲ್ಲ.

ಉಡುಪಿಯ ಜನತೆ ನಿಮ್ಮನ್ನ ಶಾಸಕನಾಗಿ ಆಯ್ಕೆ ಮಾಡಿದೆ. ಜನರ ಸಮಸ್ಯೆಗಳಿಗೆ ಧ್ವನಿಯಾಗುವುದರ ಜೊತೆಗೆ ಅಭಿವೃದ್ದಿಗಾಗಿ ಅನುದಾನಗಳನ್ನು ತರುವ ಕೆಲಸ ಶಾಸಕನದ್ದು, ಅನುದಾನ ತರುವಲ್ಲಿ ವಿಫಲರಾಗಿರುವ ನಿಮ್ಮ ಗಂಡಸುತನ ಎಲ್ಲಿ ಹೋಗಿದೆ ಎಂದು ಪ್ರಸಾದ್‌ರಾಜ್ ಕಾಂಚನ್ ಪ್ರಶ್ನಿಸಿದ್ದಾರೆ.

ಕೇಂದ್ರದಲ್ಲಿ ನಿಮ್ಮದೆ ಬಿಜೆಪಿ ಸರ್ಕಾರ ಇದೆ ಸಾಕಷ್ಟು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಇಂದ್ರಾಳಿ ರಸ್ತೆಗೆ ಒಮ್ಮೆ ಮುಕ್ತಿ ನೀಡಿ ವಾಹನ ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಡಿ. ಸಂತೆಕಟ್ಟೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಆಮೆ ವೇಗದಲ್ಲಿ ನಡೆಯುತ್ತಿದೆ, ಅದಕ್ಕೆ ವೇಗ ಕೊಡುವ ಕೆಲಸ ಮಾಡಿ. ಅದು ಬಿಟ್ಟು ಸದಾ ಶಾಂತಿಯಿಂದ ಕೂಡಿದ ಉಡುಪಿಯಂತಹ ಕ್ಷೇತ್ರದಲ್ಲಿ ಶಾಂತಿ ಭಂಗದಂತಹ ಹೇಳಿಕೆಗಳನ್ನು ನೀಡುವುದು. ಮುಖ್ಯಮಂತ್ರಿಗಳು, ಉಸ್ತುವಾರಿ ಸಚಿವರ ಬಗ್ಗೆ ಅಗೌರದ ಹೇಳಿಕೆಗಳನ್ನು ನೀಡುವುದು ಬಿಟ್ಟು, ಕ್ಷೇತ್ರದಲ್ಲಿ ಸೌಹರ್ದತೆ ಕಾಪಾಡುವ ಕೆಲಸ ಮಾಡುವುದರ ಜೊತೆ ಅನುದಾನ ತರುವ ಕೆಲಸವನ್ನು ಜವಬ್ದಾರಿಯುತವಾಗಿ ಮಾಡಿ ಎಂದು ಶಾಸಕರಿಗೆ ಕಿವಿ ಮಾತು ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!