ಸೆ.16: ಜಾಮಿಯಾ ಮಸೀದಿಯಲ್ಲಿ “ಬೃಹತ್ ರಕ್ತದಾನ ಶಿಬಿರ”

ಉಡುಪಿ: ಪ್ರವಾದಿ ಮಹಾನ್ ಚಾರಿತ್ರ್ಯವಂತ- ಸೀರತ್ ಅಭಿಯಾನದ ಪ್ರಯುಕ್ತ ಮಣಿಪಾಲ ಕಸ್ತೂರ್ಬಾ ಮೆಡಿಕಲ್ ಕಾಲೇಜು ಹಾಗೂ ಉಡುಪಿ ಜೀವ ಸಂಜೀವಿನಿ ಇದರ ಸಹಯೋಗದೊಂದಿಗೆ ಬೃಹತ್ ರಕ್ತದಾನ ಶಿಬಿರವನ್ನು ಸೆ.16ರಂದು ಬೆಳಿಗ್ಗೆ 9.30ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಉಡುಪಿ ಜಾಮಿಯಾ ಮಸೀದಿಯಲ್ಲಿ ನಡೆಯಲಿದೆ ಎಂದು ಎಸ್ ಐಒ ಜಿಲ್ಲಾಧ್ಯಕ್ಷ ಅಯಾನ್ ಮಲ್ಪೆ ತಿಳಿಸಿದರು.

ಉಡುಪಿಯಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಜೇಷನ್, ಸಾಲಿಡಾರಿಟಿ ಯುತ್ ಮೂಮೆಂಟ್, ಗರ್ಲ್ಸ್ ಇಸ್ಲಾಮಿಕ್ ಆರ್ಗನೈಜೇಷನ್, ಹುಮಾನಿಟೇರಿಯನ್‌ ರೀಲಿಫ್ ಸೊಸೈಟಿ ಇದರ ಸಂಯೋಜನೆಯಲ್ಲಿ ಈ ಶಿಬಿರ ಆಯೋಜಿಸಲಾಗಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಎಸ್ ವೈಎಂ ಕಾರ್ಯದರ್ಶಿ ಮಹಮ್ಮದ್ ಜೌಹಾರ್ ಹೂಡೆ, ಎಚ್ ಆರ್ ಎಸ್ ಅಧ್ಯಕ್ಷ ಬಿಲಾಲ್ ಮಲ್ಪೆ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!