ಉಡುಪಿ: ಡಾ.ಕೃಷ್ಣ ಪ್ರಸಾದ್ ಅವರಿಗೆ ಮಾತೃ ವಿಯೋಗ

Oplus_131072

ಉಡುಪಿ, ಸೆ.5: ಕಿನ್ನಿಮುಲ್ಕಿ ನಿವಾಸಿ, ನಿವೃತ್ತ ಅರಣ್ಯ ಅಧಿಕಾರಿ ಕೂಡ್ಲು ರಘುರಾಮ್ ಅವರ ಧರ್ಮಪತ್ನಿ ವೀಣಾ ರಾವ್(71) ಹೃದಯಾಘಾತದಿಂದ ಸೆ.6ರಂದು ಸ್ವಗೃಹದಲ್ಲಿ ನಿಧನರಾದರು.

ಉಡುಪಿ ಪ್ರಸಾದ್ ನೇತ್ರಾಲಯ ಸಮೂಹ ಕಣ್ಣಿನ ಆಸ್ಪತ್ರೆಗಳ ನಿರ್ದೇಶಕರಾಗಿದ್ದ ಇವರು, ರಾಮಕ್ಷತ್ರಿಯ ಸಂಘಗಳ ಪದಾಧಿಕಾರಿಗಳಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಇವರು ತಮ್ಮ ಪತಿ, ಪುತ್ರ ನೇತ್ರ ತಜ್ಞ ಡಾ.ಕೃಷ್ಣ ರಪ್ರಸಾದ್ ಸೇರಿದಂತೆ ಇಬ್ಬರು ಪುತ್ರರು ಹಾಗೂ ಇಬ್ಬರು ಪುತ್ರಿಯರು ಮತ್ತು ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.
ಮೃತರ ಅಂತ್ಯಸಂಸ್ಕಾರವು ಬೀಡಿನಗುಡ್ಡೆಯ ರುದ್ರಭೂಮಿಯಲ್ಲಿ ಇಂದು ಸಂಜೆ 5.30 ಗಂಟೆಗೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

Leave a Reply

Your email address will not be published. Required fields are marked *

error: Content is protected !!